19-03-2017, 4:08 AM
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ಜರುಗಿತು. ಮಂಗಳೂರು ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ ಹಾಗೂ ನೂತನ ಮೇಯರ್ ಶ್ರೀಮತಿ ಕವಿತಾ ಸನಿಲ್ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮುಂಬೈ ಹೈಕೋರ್ಟು ವಕೀಲರಾದ ಶ್ರೀಮತಿ ರೋಹಿಣಿ ಸಾಲ್ಯಾನ್,ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೀತಾಂಜಲಿ ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅದ್ಯಕ್ಷ ಎಚ್. ಎಸ್. ಸಾಯಿರಾಂ, […]
Read More
19-03-2017, 4:04 AM
ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯ ಹಿಂದೆ ಕಲ್ಲು ಮುಳ್ಳುಗಳ ಹಾದಿಯ ಮೂಲಕ ಕಠಿಣವಾದ ಪರಿಶ್ರಮವಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಅಭಿನಂದಿಸಿದ ಯುವವಾಹಿನಿ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಮಂಗಳೂರಿನ ಪ್ರಥಮ ಪ್ರಜೆ ಶ್ರೀಮತಿ ಕವಿತಾ ಸನಿಲ್ ತಿಳಿಸಿದರು. ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯ ಗ್ಲಾಸ್ ಹೌಸ್ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ […]
Read More
20-11-2016, 11:21 AM
ನ. 20 ರಂದು ಬೆಳ್ತಂಗಡಿ ಆಶಾ ಸಾಲಿಯಾನ್ ಕಲ್ಯಾಣ ಮಂಟಪದ ದಿ| ಶ್ರೀಮತಿ ಮುತ್ತಕ್ಕೆ ಮತ್ತು ದಿ| ಕೋಟ್ಯಪ್ಪ ಪೂಜಾರಿ ವರ್ಪಾಳೆ ಸಭಾ ವೇದಿಕೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿಯ ಅಂತರ್ಘಟಕ ಸಾಂಸ್ಕೃತಿಕ ವೈಭವ ’ಡೆನ್ನನ ಡೆನ್ನನ’ ಎಂಬ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ತೆಂಕುತಿಟ್ಟಿನ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಉದ್ಘಾಟಿಸಿ ಮಾತನಾಡುತ್ತಾ, ಮನುಷ್ಯ ಜನ್ಮದಲ್ಲಿ ಹುಟ್ಟಿ ಹೇಗೆ ನಡೆಯಬೇಕು ಎಂಬ ಮಾರ್ಗದರ್ಶನ ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳು ಹಾಗೂ […]
Read More
31-07-2016, 1:01 PM
ಕ್ರೀಡಾ ಪಟುಗಳ ವಿಶ್ವದ ಅತ್ಯುನ್ನತ ವೇದಿಕೆ- ಒಲಿಂಪಿಕ್ಸ್ ಇದರಲ್ಲಿ ಭಾಗವಹಿಸಲು ಬೇಕಾದ ಅರ್ಹತೆಯನ್ನು ಗಳಿಸುವುದೇ ಅತ್ಯಂತ ಕಷ್ಟಕರ ಪ್ರಯಾಸಕರ ಸವಾಲು. ಕ್ರೀಡೆಯ ತನ್ನ ಆಸಕ್ತಿಗಳನ್ನು ಮಾರ್ಗದರ್ಶಕರಾದ ಶ್ರೀಯುತ ಅಬ್ಬಾಸ್ ಹಾಗೂ ಲಚ್ಚೇಂದ್ರ ರಿಂದ ಪೋಷಿಸಿಕೊಂಡು ನಂಬಲಸಾಧ್ಯ ಸಾಧನೆ- ಒಲಿಂಪಿಕ್ಗೆ ಆಯ್ಕೆಯ ಕನಸನ್ನು ನೆನಸಾಗಿಸಿದ ಕರ್ನಾಟಕದ ಹೆಮ್ಮೆಯ ಶ್ರೀ ಮನೀಷ್ ಪೂಜಾರಿ ಒಬ್ಬ ಧ್ರುವತಾರೆ. ಕರ್ನಾಟಕದ ಉಸೈನ್ ಬೋಲ್ಟ್ ಎಂದು ಕರೆಯಲ್ಪಡಲು ಅರ್ಹ ರಾಷ್ಟ್ರೀಯ ದಾಖಲೆಯುತ್ತ ಸಾಗುವ ಪ್ರಥಮಹಂತ, ರಾಜ್ಯ ದಾಖಲೆಯ 100ಮೀ. ಓಟದಲ್ಲಿ 10.5 ಸೆಕೆಂಡುಗಳಲ್ಲಿ ಹಾಗೂ 21.5 ಸೆ.ನಲ್ಲಿ […]
Read More
31-07-2016, 12:56 PM
ವಿದ್ಯಾರ್ಥಿಯೊಬ್ಬರ ಸತತ ಪರಿಶ್ರಮದ ಸಾಧನೆಯ ಮಾನದಂಡ ಆತ/ ಆಕೆ ಗಳಿಸುವ ಶೇಕಡಾವಾರು ಅಂಕ. ಈ ನಿಟ್ಟಿನಲ್ಲಿ ಈ ಬಾರಿ SSLC ಪರೀಕ್ಷೆಯಲ್ಲಿ 625 ಕ್ಕೆ 622 ಅಂಕಗಳಸಿ ಶೇ. 99.52 % ಸಾಧನೆ ಮಾಡಿದ ಕು| ರಕ್ಷಾ ಡಿ ಅಂಚನ್ ನೋಡುವವರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಶ್ರೀ ದೇವಿಪ್ರಸಾದ್ ಹಾಗೂ ಶ್ರೀಮತಿ ವಿನೋದಾ ದಂಪತಿಗಳ ಈ ಹೆಮ್ಮೆಯ ಕುವರಿ. ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದಾಳೆ. ಕನ್ನಡದಲ್ಲಿ 125 ಕ್ಕೆ 125, ಹಿಂದಿ, ಗಣಿತ ಹಾಗೂ ವಿಜ್ಞಾನದಲ್ಲಿ 100 ಕ್ಕೆ 100 […]
Read More
31-07-2016, 12:49 PM
2015-16 ರ ಸಾಲಿನ CBSE 10 ೦ನೇ ತರಗತಿ ಪರೀಕ್ಷೆಯಲ್ಲಿ ಉದ್ಯಾವರ ಪ್ರತಾಪ್ ಕುಮಾರ್ 10 ಕ್ಕೆ 10 ಗ್ರೇಡ್ ಅಂಕ ಗಳಿಸಿರುತ್ತಾನೆ. ವಿಜ್ಞಾನ ಮಾದರಿಯಲ್ಲಿ ರಾಜ್ಯ ಮಟ್ಟದ ಪ್ರದರ್ಶನ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯ ಜೂನಿಯರ್ ಹಾಗೂ ಸೀನಿಯರ್ ಗ್ರೇಡ್ನಲ್ಲಿ ವಿಶಿಷ್ಟ ಶ್ರೇಣಿ, ಅಂತರ ಶಾಲಾ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ ಈತ ಕಾಲ್ಚೆಂಡು ಆಟಗಾರ ಕೂಡ. ಶಾಲೆಯಲ್ಲಿ ಪ್ರಬಂಧ, ಭಾಷಣ, ಹಾಡುಗಾರಿಕೆ, ಛದ್ಮವೇಷ, ವಿಜ್ಞಾನ ಮಾದರಿ, ಗೂಡುದೀಪ ತಯಾರಿಕೆ, […]
Read More
31-07-2016, 12:46 PM
ಕು| ನಿಧಿಶಾ-ಕರ್ನಾಟಕದ ಪ್ರೌಢ ಶಿಕ್ಷಣ ಮಂಡಳಿ ಕಳೆದ 2016 ಮಾರ್ಚ್ನಲ್ಲಿ ನಡೆಸಿದ SSLC ಪರೀಕ್ಷೆಯಲ್ಲಿ 625 ಕ್ಕೆ ನಂಬಲಸಾಧ್ಯವಾದ 620 ಅಂಕಗಳಿಂದ ಕಲಿತ ಶಾಲೆಯ ಅಧ್ಯಾಪಕರು, ಪೋಷಕರು ಮತ್ತು ಬಿಲ್ಲವ ಸಮುದಾಯವೇ ಹೆಮ್ಮೆ ಪಡುವ ಸಾಧನೆ ಮಾಡಿರುತ್ತಾರೆ. ಈ ಬೆಲೆ ಕಟ್ಟಲಾಗದ ನಿಧಿ ಬರೀ ಕಲಿಕೆಗೇ ಸೀಮಿತಗೊಂಡಿಲ್ಲ. ಸಾಮಾನ್ಯವಾಗಿ ಕಲಿಕೆಯಲ್ಲಿ ಮುಂಚೂಣಿಯಲ್ಲಿರಬೇಕಾದಲ್ಲಿ ಬರೀ, ಪುಸ್ತಕ-ಓದು ಇಷ್ಟಕ್ಕೆ ಸೀಮಿತವಿರಬೇಕೆಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ ನಿಧಿಶಾಳ ಪೋಷಕ ಲೋಕನಾಥ್-ಚಿತ್ರಕಲಾ ದಂಪತಿಗಳು ತಮ್ಮ ಮಗಳು ಇತರ ಸಾಧನೆಯನ್ನು ಮಾಡಲೂ ಪ್ರೋತ್ಸಾಹಿಸಿರುವುದು ಸಂತಸದ ವಿಚಾರ. ಪ್ರಬಂಧ ಸ್ಪರ್ಧೆಯಲ್ಲಿ […]
Read More
31-07-2016, 12:44 PM
ಮೂಲ್ಕಿ ಚಿತ್ರಾಪಿನ ಶ್ರೀಮತಿ ಭಾರತಿ ಹಾಗೂ ಶ್ರೀ ಭಾಸ್ಕರ ಕೋಟ್ಯಾನ್ ದಂಪತಿಗಳು ತಮ್ಮ ಮಗಳು ಕು|ರಿಶಿಕಾ ಬೆಳೆದು ಶೈಕ್ಷಾಣಿಕ ಸಾಧನೆಯಿಂದ ಪಠ್ಯೇತರ ಸಾಧನೆಯಿಂದ ತಮಗೆ ಉತ್ತಮ ಹೆಸರು ತರಬಹುದೆಂದು ತಿಳಿದಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಲ್ಲವಸಮುದಾಯದ ಇತ್ತೀಚಿನ ಸಮಾಜೋನ್ನತಿ ಕಾರ್ಯಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡು ಯುವವಾಹಿನಿ ಎಂಬ ಸಂಸ್ಥೆಯ ಕಣ್ಣಿಗೆ ಬಿದ್ದ ಈ ಪ್ರತಿಭೆ ಇದೀಗ ಕಲಿಕೆ ಮತ್ತು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ನೃತ್ಯ ಪ್ರಾಕಾರವಾದ ಭರತ ನಾಟ್ಯ ಹೀಗೆ ಎರಡರಲ್ಲೂ ಹೆಸರುಗಳಿಸಿದ್ದು ಉಲ್ಲೇಖನೀಯ ಅಂಶ. ಖ್ಯಾತ ತುಳುನಾಡ […]
Read More
31-07-2016, 12:39 PM
ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ| ಉಮ್ಮಪ್ಪ ಪೂಜಾರಿ ಹಾಗೂ LIC ಉದ್ಯೋಗಿ ಶ್ರೀಮತಿ ರೇಖಾ ದಂಪತಿಗಳ ಪುತ್ರ ಕ್ಷಿಪ್ರಜ್ ಯು CBSE ಹತ್ತನೆಯ ತರಗತಿಯಲ್ಲಿ ಹತ್ತರಲ್ಲಿ ಹತ್ತು ಗ್ರೇಡ್ ಪಾಯಿಂಟ್ ಗಳಿಸಿರುತ್ತಾನೆ. ಪ್ರತಿಭಾವಂತ ವಿದ್ಯಾರ್ಥಿಯಾದ ಈತ ಕೇಂದ್ರಿಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 21 ನೇ ಸ್ಥಾನ ಪಡೆದಿದ್ದು ದಕ್ಷಿಣ ಭಾರತ ಹಿಂದಿ ಪ್ರಚಾರ್ ಸಭಾ ಇವರು ನಡೆಸಿದ ರಾಷ್ಟ್ರ ಭಾಷಾ ಪ್ರವೀಣ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದಿದ್ದಾನೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಜೂನಿಯರ್ […]
Read More
31-07-2016, 12:20 PM
ಭಾರತ ಸರಕಾರದ CBSE 10ನೆಯ ತರಗತಿಯಲ್ಲಿ ಈಕೆ 10 ಕ್ಕೆ 10 ಅಂಕ ಗಳಿಸಿ ತನ್ನ ಕಲಿಕಾ ಸಾಮರ್ಥ್ಯ ಯಾರಿಗೇನೂ ಕಡಿಮೆ ಇಲ್ಲ ಎಂದು ನಿರೂಪಿಸಿದ್ದಾಳೆ! ಶಹಬ್ಬಾಸ್! ಎನ್ನಬೇಕಲ್ಲ ನಾವು ನೀವೆಲ್ಲ? ತಂದೆ ಸತೀಶ್ ಮತ್ತು ತಾಯಿ ಅಮಿತಾ-ಪುತ್ರಿ ಶಮಿತಾ-ವಾಹ್! ದೈಹಿಕ ಕ್ಷಮತೆಯ ಪುರಾತನ ಆತ್ಮ ರಕ್ಷಣಾ ಕಲೆ ಕರಾಟೆಯಲ್ಲಿ ಹಲವು ಹತ್ತು ಪ್ರಶಸ್ತಿ ಗಳಿಸಿದ ಶಮಿತಾ ಬಿಲ್ಲವ ಸಮಾಜದ ಕರಾಟೆ ಕಿಡ್ ಎನಿಸುವುದು ನಿಸ್ಸಂಶಯ. ಕರಾಟೆ ಕಲೆಯಲ್ಲಿ ತನ್ನನ್ನು ಪರಿಪೂರ್ಣವಾಗಿ ಪಳಗಿಸಿಕೊಂಡು ಪಡೆದ ಯಶಸ್ಸಿನ ಸಾಕ್ಷಿ ಯುವವಾಹಿನಿ ಸಂಸ್ಥೆಗೆ […]
Read More