08-03-2017, 11:00 AM
ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆ ಎಂದರೆ ಸಾಕು ಹೆಣ್ಣು ಹೆತ್ತವರಿಗೆ ಒಂದು ರೀತಿಯ ಆತಂಕ ಮತ್ತು ಸಂಭ್ರಮ. ಸೂರ್ಯ ಮೂಡುವ ಮುನ್ನವೆ ಎದ್ದು ಮನೆಯನ್ನು ಒಪ್ಪಓರಣ ಮಾಡಿಟ್ಟುಕೊಳ್ಳುತ್ತಾರೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಸಿದ್ಧಪಡಿಸುತ್ತಾರೆ. ಶಿಸ್ತು, ರುಚಿಕಟ್ಟಾದ ಅಡುಗೆ, ಒಪ್ಪವಾಗಿರುವ ಮನೆ, ಅಲಂಕಾರ ಗೊಂಡಿರುವ ಹೆಣ್ಣುಮಗಳು ಸಂಭ್ರಮದ ಓಡಾಟ ಇದಕ್ಕೆಲ್ಲ ಕೊರತೆಯೇ ಕಂಡು ಬರುವುದಿಲ್ಲ. ಇದು ಒಂದು ಮನೆಯ ಕಥೆಯಾದರೆ ಇನ್ನು ಸಾಮೂಹಿಕ ವಧು-ವರಾನ್ವೇಷಣೆ ನಡೆಸಿದರೆ ಹೇಗಿರಬಹುದು? ಈ ಕಲ್ಪನೆಯೇ ಒಂದು ಅದ್ಭುತ ಅನಿಸುವುದಿಲ್ಲವೇ? ಏನೋ ಸಮ್ಥಿಂಗ್ ಸ್ಪೇಷಲ್ […]
Read More
05-03-2017, 11:28 AM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ತಾ 5-3-2017 ನೇ ಆದಿತ್ಯವಾರ ಯುವವಾಹಿನಿ ಅಂತರ್ ಘಟಕ ಮಹಿಳಾ “ದೇಯಿ ಬೈದ್ಯೆದಿ ಕ್ರೀಡಾಕೂಟ” ಕುದ್ರೋಳಿ ಶ್ರೀ ನಾರಾಯಣಗುರು ಕಾಲೇಜು ಮೈದಾನದಲ್ಲಿ ನಡೆಯಿತು. ಕ್ರೀಡೆಯು ಮಾನವೀಯ ಸಂಬಂಧ ಬೆಸೆದು ಸಾಮರಸ್ಯ ಮೂಡಿಸುತ್ತದೆ. ಯುವವಾಹಿನಿ ಮಹಿಳಾ ಘಟಕವು ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾದುದು ಎಂದು ಕುದ್ರೋಳಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಲತಾ ಎನ್. ಸುವರ್ಣರವರು ಕ್ರೀಡಾಕೂಟ ಉದ್ಘಾಟಿಸಿ ತಿಳಿಸಿದರು. ಯುವವಾಹಿನಿ ಕೆಂದ್ರಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಮಹಿಳಾ ಘಟಕದ […]
Read More
05-03-2017, 7:07 AM
ಸುರತ್ಕಲ್ ಯುವವಾಹಿನಿ ಕುಟುಂಬ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮವು ದಿನಾಂಕ 05.03.2017 ನೇ ಆದಿತ್ಯವಾರ ಪ್ರಕೃತಿಯ ರಮಣೀಯ ಸ್ಥಳವಾದ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಜರುಗಿತು. ಯುವವಾಹಿನಿ ಸುರತ್ಕಲ್ ಘಟಕದ ಅದ್ಯಕ್ಷ ರವೀಂದ್ರ ಕೋಟ್ಯಾನ್, ನಿಕಟಪೂರ್ವ ಅದ್ಯಕ್ಷ ಭಾಸ್ಕರ್ ಸಾಲ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ, ಉಪಾಧ್ಯಕ್ಷ ಯಶವಂತ ಪೂಜಾರಿ ಮತ್ತಿತರ ಗಣ್ಯರು ಸೇರಿದಂತೆ 60ಕ್ಕೂ ಹೆಚ್ಚು ಕುಟುಂಬ ಸದಸ್ಯರು ಭಾಗವಹಿಸಿದ್ದರು ವಿವಿಧ ಆಟೋಟ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳನ್ನು ಸಡೆಸಲಾಯುತು. ಸುರತ್ಕಲ್ ಯುವವಾಹಿನಿ ಕಾರ್ಯದರ್ಶಿ ರಿತೇಶ್ ಕುಮಾರ್ […]
Read More
03-03-2017, 5:00 AM
ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಶಿಕ್ಷಣ ಸುಧಾರಣಾ ಅಭಿಯಾನ ನಡೆಸುತ್ತಿರುವ ಹಾಗೂ ಬಂಟ್ವಾಳ ದಡ್ಡಲಕಾಡು ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅದ್ಯಕ್ಷ ಶ್ರೀ ಪ್ರಕಾಶ್ ಅಂಚನ್ ಅವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಗಣನೀಯ ಸಾಧನೆಯನ್ನು ಗುರುತಿಸಿ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ದಿನಾಂಕ 03.03.2017 ನೇ ಶುಕ್ರವಾರದಂದು ಜರುಗಿದ ಹುಟ್ಟೂರ ಅಭಿನಂದನಾ ಸಮಾರಂಭದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಅಭಿನಂದಿಸಲಾಯಿತು. ಈ […]
Read More
02-03-2017, 9:09 AM
ಉಪ್ಪಿನಂಗಡಿ ಗ್ರಾಮದ ಬಡ ಕುಟುಂಬದ ನಾರಾಯಣ ಪೂಜಾರಿಯವರ ಮನೆ ನಿರ್ಮಾಣದ ಉದ್ದೇಶಕ್ಕಾಗಿ ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ವತಿಯಿಂದ ರೂ 10,000/- ಆರ್ಥಿಕ ನೆರವು ನೀಡಲಾಯಿತು. ನೆಕ್ಕಿಲಾಡಿ ಮಾಂಡೊವಿ ಮೋಟಾರ್ಸ್ ಇದರ ಸರ್ವಿಸ್ ಮೇನೇಜರ್ ಚಂದ್ರಶೇಖರ್ ಧನ ಸಹಾಯ ವಿತರಿಸಿದರು ಮತ್ತು ಉಪ್ಪಿನಂಗಡಿ ಯುವವಾಹಿನಿಯ ಸಮಾಜಮುಖಿ ಕಾರ್ಯ ಶ್ಲಾಘನೀಯ ಹಾಗೂ ಮನೆ ನಿರ್ಮಾಣವು ಶೀಘ್ರವಾಗಿ ನೆರವೇರುವಂತಾಗಲಿ ಎಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಉಪ್ಪಿನಂಗಡಿ ಯುವವಾಹಿನಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಕಾರ್ಯದರ್ಶಿ ಮನೋಜ್ ಸಾಲ್ಯಾನ್ ಸುಣ್ಣಾಜೆ, ಗೌರವ […]
Read More
01-03-2017, 4:13 AM
ದಿನಾಂಕ 1-3-2017 ರಂದು ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಸಭಾಂಗಣದಲ್ಲಿ ಯುವವಾಹಿನಿ (ರಿ) ಕೂಳೂರು ಘಟಕ ಮತ್ತು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಇವುಗಳ ಜಂಟಿ ಆಶ್ರಯದಲ್ಲಿ ಕಾನೂನು ಹಾಗೂ ಗಸ್ತು ವ್ಯವಸ್ಥೆಯ ಬಗ್ಗೆ ಮಾಹಿತಿ ಕಾರ್ಯಾಗಾರ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಳೂರು ಘಟಕದ ಉಪಾಧ್ಯಕ್ಷ ಪುಷ್ಪರಾಜ್ ಕುಮಾರ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾವೂರು ಪೊಲೀಸ್ ಠಾಣೆಯ ಪಿಎಸ್ಐ ಉಮೇಶ್ ಕುಮಾರ್ ಅವರು ಗಸ್ತು ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷ […]
Read More