25 ಅಧ್ಯಕ್ಷರುಗಳ ಸನ್ಮಾನ-2014′ ರಜತ ಸಂಭ್ರಮ-ಯುವವಾಹಿನಿ(ರಿ) ಬಂಟ್ವಾಳ
07-03-2014, 10:56 AM
19-01-2014, 11:57 AM
ಸಾಮಾಜಿಕ ಸ್ಥಾನಮಾನ ಇಲ್ಲದ ವರ್ಗದವರಿಗೆ ಶಕ್ತಿ ತುಂಬುವ ಕಾರ್ಯವನ್ನು ಬ್ರಹ್ಮಶ್ರೀ ನಾರಾಯಣಗುರು ಮಾಡಿದ್ದಾರೆ. ಅವರ ತತ್ವ ಸಂದೇಶವನ್ನು ಯುವಕರು ಪಾಲಿಸಬೇಕು ಹಾಗೂ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಕಳೆದ 25 ವರ್ಷಗಳ ಸಾಧನೆ ಶ್ಲಾಘನೀಯವಾದುದು ಎಂದು ಕೇಂದ್ರ ಸರಕಾರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದರು. ಅವರು ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣಗುರು ನಗರದ ಕಾಂತಬಾರೆ ಬೂದಬಾರೆ ಸಭಾಂಗಣದ ಕೋಟಿ ಚೆನ್ನಯ ವೇದಿಕೆಯಲ್ಲಿ ಜರುಗಿದ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮ […]
19-01-2014, 4:58 AM
ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮದ ಪ್ರಯುಕ್ತ ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡಿನ ಪೊಳಲಿ ದ್ವಾರದಿಂದ ಬ್ರಹ್ಮಶ್ರೀ ನಾರಾಯಣಗುರುವರ್ಯರ ತತ್ವ ಸಂದೇಶಗಳನ್ನು ಸಾರುವ ಸಹಸ್ರಾರು ಜನರು ಭಾಗವಹಿಸಿದ ಭವ್ಯ ಮೆರವಣಿಗೆಯು ಬಿ.ಸಿ.ರೋಡಿನ ಗಾಣದಪಡ್ಪು ನಾರಾಯಣಗುರು ನಗರಕ್ಕೆ ಆಗಮಿಸಿತು. ಯುವವಾಹಿನಿಯ 18 ಘಟಕಗಳು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ, ಹಾಗೂ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳ ಬಿಲ್ಲವ ಸಂಘಟನೆಗಳಿಂದ ಆಗಮಿಸಿದ ಗುರುಸಂದೇಶ ಯಾತ್ರೆಯು ಬಿ.ಸಿ.ರೋಡಿನ ಪೊಳಲಿ ದ್ವಾರದಲ್ಲಿ ಒಟ್ಟು ಸೇರಿದವು. ಬಂಟ್ವಾಳ ತಾಲೂಕು ಬಿಲ್ಲವ […]
19-01-2014, 4:03 AM
ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಕಿರಿಯರು ಮುಂದೆ ಬರಲು ಅವಕಾಶ ಕಲ್ಪಿಸಬೇಕು, ಇದ್ದಷ್ಟು ಸಮಯ ತಾನೇ ಇರಬೇಕು ಎಂಬ ನಿಯಮ ಸರಿಯಲ್ಲ, ಹಾಗೂ ಯುವಕರು ಯುವ ಬಿಲ್ಲವ ಸಮಾವೇಶ ಅತ್ಯಂತ ಯಶಸ್ವಿಯಾಗಿ ಸಂಘಟಿಸಿರುವುದು ಬಂಟ್ವಾಳ ಯುವವಾಹಿನಿಯ ಶಕ್ತಿಯನ್ನು ಅನಾವರಣಗೊಳಿಸಿದೆ ಎಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ತಿಳಿಸಿದರು. ಅವರು ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣಗುರು ನಗರದ ಕಾಂತಬಾರೆ ಬೂದಬಾರೆ ಸಭಾಂಗಣದ ಕೋಟಿ ಚೆನ್ನಯ ವೇದಿಕೆಯಲ್ಲಿ ಜರುಗಿದ ಯುವವಾಹಿನಿ ಬಂಟ್ವಾಳ ತಾಲೂಕು […]
04-08-2013, 1:05 PM
ದೇವರು ಕೊಟ್ಟ ಪ್ರತಿಭೆಯನ್ನು ಆಧರಿಸಿ ಬರಮಾಡಿಕೊಳ್ಳದೇ ಅವಕಾಶ ಇಲ್ಲ ಎಂದು ಹಲುಬುವವರೇ ಅಧಿಕವಾಗಿರುವ ಇಂದಿನ ದಿನದಲ್ಲಿ ತನ್ನೊಳಗೆ ದೇವರಿತ್ತ ಸುಪ್ತ ಪ್ರತಿಭೆಯನ್ನು ಒರೆಗೆ ಹಚ್ಚಿಕೊಂಡು ಸೀಮಿತವಾದ ಅವಕಾಶಗಳನ್ನೆ ಬಳಸಿಕೊಂಡು ಬೆಳೆಯುವವರು ತೀರಾ ವಿರಳ ಎನ್ನಬಹುದು. ಅಂತಹ ಪ್ರತಿಭೆಗಳ ಸಾಲಿನಲ್ಲಿ ಬರುವವರೇ ಕಿರಣ್ ಕುಮಾರ್ ಕೊಕುಡೆ. ಗ್ರಾಮೀಣ ಪ್ರದೇಶವಾದ ಕಿನ್ನಿಗೋಳಿ ಸಮೀಪದ ಕೊಕುಡೆ ನಿವಾಸಿಯಾಗಿರುವ ಕಿರಣ್ಕುಮಾರ್ 21 ರ ಹರೆಯದ ಯುವಕ. ಆದರೆ ಅವರು ಮೆರೆದ ಸಾಧನೆ ಮಾತ್ರ ೫೦ರ ಹಿರಿಯರೂ ನಾಚಬೇಕು ಎನ್ನುವಂತಹ ಸಾಧನೆ. ಸಾಹಿತ್ಯ ರಂಗದಲ್ಲಿ ಉತ್ತಮ […]
04-08-2013, 5:00 AM
ಮಾನವ ಜೀವನವನ್ನು ನಾಲ್ಕು ಭಾಗಗಳನ್ನಾಗಿ ನಮ್ಮ ಹಿರಿಯರು ಗುರುತಿಸಿದ್ದಾರೆ. ಅದೇ ಬಾಲ್ಯ, ಯೌವ್ವನ ಮತ್ತು ಗೃಹಸ್ಥಾಶ್ರಮ – ಆಯಾಯ ವಯಸ್ಸಿನಲ್ಲಿ ಮಾನವ ಮಾಡಬೇಕಾದ ಕೆಲಸವನ್ನು ಹೇಳಿದ್ದಾರೆ. ಬಾಲ್ಯದಲ್ಲಿ ಬ್ರಹ್ಮಚರ್ಯ, ಶಿಕ್ಷಣ, ಸಂಸ್ಕೃತಿ, ನಯ-ವಿನಯ ಮತ್ತು ಯಾವುದಾದರು ಒಂದು ವಿಚಾರದಲ್ಲಿ ಕುಶಲತೆ ಇರಲೇಬೇಕು. ಆಗ ಯೌವ್ವನ ಯಶಸ್ವಿಯಾಗುತ್ತದೆ. ಯೌವ್ವನದಲ್ಲಿ ಆತನು ಕಲಿತ ವಿದ್ಯೆಯಿಂದ ಕುಶಲತೆ ಹೊಂದಿರುವ ಒಂದು ಉದ್ಯೋಗ ಹೊಂದಿ ಗೃಹಸ್ಥಾಶ್ರಮ ಪಡೆದು, ಕುಟುಂಬದ ಹೊರೆಯನ್ನು ಹೊರಬೇಕಾಗಿದೆ. ಬಾಲ್ಯದ ಶಿಕ್ಷಣದ ತಯಾರಿ ಯೌವ್ವನದ ಕೆಲಸಕ್ಕೆ ಅನುಕೂಲ ಮಾಡಿ ಕೊಡುತ್ತದೆ. […]
04-08-2013, 4:58 AM
ಯಾವುದೇ ಒಂದು ವಿಷಯವನ್ನು ವ್ಯಷ್ಠಿಯಾಗಿ ಅಥವಾ ಸಮಷ್ಠಿಯಾಗಿ ಜನಮಾನಸಕ್ಕೆ ತಲುಪಿಸುವ ಸೇತುವೆಯೇ ಮಾಧ್ಯಮ. ಹಿಂದಣ ದಿನಗಳಲ್ಲಿ ಪುರಾಣ ಕತೆಗಳನ್ನೋ ಮಹಾಕಾವ್ಯಗಳನ್ನೋ ಜನರಿಗೆ ತಲುಪಿಸಲು ಗಮಕ, ಪ್ರವಚನ, ಹರಿಕಥೆ, ಯಕ್ಷಗಾನ, ಬಯಲು ನಾಟಕ ಇತ್ಯಾದಿ ಪ್ರಕಾರಗಳು ಮಾಧ್ಯಮವಾಗಿ ಬಳಕೆಯಾಗುತ್ತಿದ್ದರೆ, ಒಂದೂರಿಂದ ಇನ್ನೊಂದೂರಿಗೆ ಸುದ್ದಿಗಳು ತಲುಪಬೇಕಾದರೆ ಬಹು ನಿಧಾನವಾಗಿ, ಎಷ್ಟೋ ಕಾಲದ ತರುವಾಯ ಬಹು ವಿಳಂಬಿತ ವ್ಯವಸ್ಥೆಯಿತ್ತು. ಹಲವಾರು ಸುದ್ದಿಗಳು ಗತಕಾಲದ ಇತಿಹಾಸವಾದ ನಂತರ ಕೆಲವರಿಗೆ ತಲುಪುತಿತ್ತು. ಬ್ರಿಟಿಷರ ಆಗಮನದ ತರುವಾಯ ನಮ್ಮ ದೇಶದಲ್ಲಿ ಅಂಚೆ ವ್ಯವಸ್ಥೆ ವ್ಯಾಪಕವಾಗಿ ಹರಡಿತು. […]
04-11-2012, 11:04 AM
ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಹೀಗೆನ್ನುತ್ತಾರೆ ಬಲ್ಲವರು, ವಿದ್ಯೆ ಪಡೆದು ಸ್ವತಂತ್ರರಾದಾಗ ನಮ್ಮ ಬದುಕಿನ ನಡೆ ಜ್ಞಾನದ ಹಾದಿಯಾಗುತ್ತದೆ ಎಂದಿದ್ದಾರೆ ಬ್ರಹ್ಮಶ್ರೀ ನಾರಾಯಣ ಗುರುವರ್ಯರು. ಬಡತನದ ಬೇಗುದಿಯಲ್ಲಿ ಬೆಂದವರಿಗೆ ಅನ್ನ ನೀರು, ವಸ್ತ್ರ ವಸತಿ ಏನನ್ನು ನೀಡಿದರೂ ಅವೆಲ್ಲ ಕ್ಷಣಿಕ ಮಾತ್ರ ಮತ್ತೆ ನಾಳೆ ಹೊಸತಿಗೆ ಅವರು ಕೈ ಚಾಚುತ್ತಾರೆ ಆದರೆ ವಿದ್ಯೆ ಹಾಗಲ್ಲ ಅದು ಬತ್ತದ ಒಸರು. ವಿದ್ಯೆಯನ್ನು ಒಮ್ಮೆ ದಾನ ಮಾಡಿದರೆ ಅದು ಜೀವನ ಪರ್ಯಂತ ನಮ್ಮ ಜೊತೆಗಿರುತ್ತದೆ ಎನ್ನುವುದನ್ನು ಮನಗಂಡಿರುವ […]