Yuvavahini

MAY 17, 2017 3.01 PM IST

ಗಂಗಾಧರ ಪೂಜಾರಿ -ಸಿಂಚನ: ಮೇ 2017

ಸಂಪಾದಕರ ಮಾತು-ಗಂಗಾಧರ ಪೂಜಾರಿ

ಗಂಗಾಧರ ಪೂಜಾರಿ ಸಂಪಾದಕರು ,ಸಿಂಚನ ಪತ್ರಿಕೆ

ಪ್ರೀತಿಯ ವಾಚಕರೇ,
ಇತ್ತೀಚೆಗೆ ನನ್ನ ಬಾಲ್ಯ ಸ್ನೇಹಿತರೊಬ್ಬರನ್ನು ಭೇಟಿಯಾಗುವ ಸಂದರ್ಭ ಒದಗಿ ಬಂತು. ಇವರು ವೃತ್ತಿಯಲ್ಲಿ ದಂತ ವೈದ್ಯರು. ಬಾಲ್ಯ ಜೀವನವನ್ನು ನೆನಪಿಸುತ್ತಾ ಆ ದಿನಗಳ ಮೆಲುಕು ಹಾಕುತ್ತಿದ್ದೆವು.
ಈ ಸಂದರ್ಭದಲ್ಲಿ ಯುವಕನೊಬ್ಬ ವೈದ್ಯರಲ್ಲಿಗೆ ಬಂದು ತನ್ನ ಹಲ್ಲು ನೋವಿನ ಸಮಸ್ಯೆಯನ್ನು ತೋಡಿಕೊಂಡರು. ಒಳಗಿನಿಂದಲೇ ವೈದ್ಯರು ಯುವಕನನ್ನು ಪರೀಕ್ಷಿಸಿ ಹೊರಬಂದು ಇನ್ನು ನೀವು ಗಟ್ಟಿ ವಸ್ತುಗಳನ್ನು ತಿನ್ನುವ ಹಾಗಿಲ್ಲ. ಮೆತ್ತಗಿನ ವಸ್ತುಗಳನ್ನು ಮಾತ್ರ ಜಗಿಯಬೇಕು ಎನ್ನುತ್ತಾ ಔಷಧಿ ಬರೆದು ಕಳುಹಿಸಿಕೊಟ್ಟರು. ವೈದ್ಯರು ನನ್ನ ಎದುರುಗಡೆ ಇದ್ದ ಅವರ ಆಸನದಲ್ಲಿ ಕುಳಿತುಕೊಂಡರು. ಈ ಸಂದರ್ಭದಲ್ಲಿ ನನಗೊಂದು ಪ್ರಶ್ನೆ ಕಾಡತೊಡಗಿತು. ನೇರವಾಗಿ ವೈದ್ಯರಲ್ಲಿ ಕೇಳಿದೆ. ಅಲ್ಲ ನಿಮ್ಮಲ್ಲಿಗೆ ಬಂದವ ಯುವಕ. ಅವನಿಗೆ ಗಟ್ಟಿ ವಸ್ತುಗಳನ್ನು ತಿನ್ನಬಾರದು ಎಂದಿರಲ್ಲ, ಎಂದು. ಆಗ ವೈದ್ಯರು, ಅವನ ಬಾಯಲ್ಲಿರುವ ಹಲ್ಲಿನ ಬುಡಗಳು ಒಂದೂ ಗಟ್ಟಿಯಾಗಿಲ್ಲ. ಬಹಳ ಮೆತ್ತಗಿದೆ. ಅದಕ್ಕಾಗಿ ಹೇಳಿದೆ ಎಂದರು. ಇದಕ್ಕೆ ಕಾರಣವನ್ನು ಕೇಳಿದೆ. ವೈದ್ಯರು ಸತ್ಯವಾದ ಉತ್ತರವನ್ನೇ ಹೇಳಿದರು.
ಮೊದಲಿನ ಕಾಲದ ಜನರು ಬಹಳ ಶ್ರಮಜೀವಿಗಳಾಗಿ ಜೀವಿಸುತ್ತಿದ್ದರು. ತಮ್ಮ ತಮ್ಮ ದೇಹಕ್ಕೆ ಸಂಬಂಧಪಟ್ಟ ಅಂಗಾಂಗಗಳ ಬೆಳವಣಿಗೆಗೆ ಆ ರೀತಿಯ ಆಯಾಮಗಳ ಮುಖಾಂತರ ಕೆಲಸ ಮಾಡುತ್ತಿದ್ದರು. ನಿಜವಾಗಿ ಹೇಳಬೇಕೆಂದರೆ ದೇವರು ಪ್ರಾಣಿಗಳನ್ನು ಸೃಷ್ಟಿಸುವಾಗ ಅವುಗಳ ಬೆಳವಣಿಗೆಗೆ ಬೇಕಾಗುವ ಪ್ರಕೃತಿ ಸಂಪನ್ಮೂಲಗಳನ್ನು ಸೃಷ್ಟಿಸಿರುತ್ತಾನೆ. ಹಿಂದಿನ ಕಾಲದ ಜನರು ಇವುಗಳ ಸಂಪೂರ್ಣ ಉಪಯೋಗವನ್ನು ಪಡೆಯುತ್ತಿದ್ದರು. ನಮ್ಮ ಹಲ್ಲಿನ ಮುಖಾಂತರ ಗಟ್ಟಿ ವಸ್ತುಗಳನ್ನು ಜಗಿದು ಜೀರ್ಣಿಸಿಕೊಳ್ಳುತ್ತಿದ್ದರು. ಮೂಳೆ ಸಂದುಗಳ ರಕ್ಷಣೆಗೋಸ್ಕರ ಬೆವರು ಸುರಿಸಿ ದುಡಿಯುತ್ತಿದ್ದರು. ಇದರಿಂದ ನಮ್ಮ ಅಜ್ಜ-ಅಜ್ಜಿಯಂದಿರು ಬಾಯಲ್ಲಿ ಸಂಪೂರ್ಣ ಹಲ್ಲುಗಳೊಂದಿಗೆ ಗಟ್ಟಿ ಮುಟ್ಟಾಗಿ ಬಾಳುತ್ತಿದ್ದರು.
ಆಗ ನನಗೆ ನೆನಪಾದುದ್ದು ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ಒಲೆಯಲ್ಲಿ ಕಾಯಿಸಿದ ಹುಣಸೆ ಬೀಜ, ನೋಕಟೆಗಳನ್ನು ಕಿಸೆಯಲ್ಲಿ ತುಂಬಿಸಿಕೊಂಡು ಎಲ್ಲ ಸ್ನೇಹಿತರೊಡನೆ ಹಂಚಿ ತಿನ್ನುತ್ತಿದ್ದ ಸಂದರ್ಭ, ಆದ್ದರಿಂದಲೇ ನನ್ನ ಹಲ್ಲುಗಳು ಈಗಲೂ ಗಟ್ಟಿ ವಸ್ತುವನ್ನು ಜಗಿದು ತಿನ್ನಲು ಯೋಗ್ಯವಾಗಿದೆ ಎಂದು ಸಮಾಧಾನವಾಯಿತು.
ಇನ್ನೊಂದು ಕಡೆ ಯೋಚಿಸುವಾಗ ಫಾಸ್ಟ್‍ಫುಡ್ ಕಾರ್ಖಾನೆಯಲ್ಲಿ ತಯಾರಾಗುವ ಮೆದು ಆಹಾರಗಳನ್ನು ತಿನ್ನುತ್ತಿರುವ ಇಂದಿನ ಜನಾಂಗ ತನ್ನ ದೇಹದ ಆರೋಗ್ಯವನ್ನು ದಿನದಿಂದ ದಿನಕ್ಕೆ ಕೆಡಿಸುತ್ತಾ, ಹೆಸರೇ ಇಲ್ಲದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ವೈದ್ಯರು ಹೇಳಿದಂತೆ ಸೃಷ್ಟಿಕರ್ತನು ತನ್ನ ಜವಾಬ್ದಾರಿಯನ್ನು ಸರಿಯಾಗಿಯೇ ಮಾಡಿರುತ್ತಾನೆ. ಆದರೆ ಮಾನವ ಮಾತ್ರ ವಿರುದ್ಧವಾಗಿಯೇ ವ್ಯವಹರಿಸುತ್ತಾ ದೇವರಿಗೆ ಸವಾ ಲಾಗಿ ನಿಲ್ಲಲು ಪ್ರಯತ್ನಿಸುತ್ತಾನೆ. ಎಲ್ಲದರಲ್ಲೂ ಇದು ನಡೆಯಲ್ಲ ಎಂಬ ಸತ್ಯವನ್ನು ಮಾತ್ರ ನಾವು ಅರಿಯಬೇಕು. ಬರೇ ಫಾಸ್ಟ್‍ಫುಡ್ ನಂತ ಮೆದು ಆಹಾರವನ್ನೇ ಅವಲಂಭಿಸದೆ ಪ್ರಕೃತಿಯ ಮೂಲ ವಸ್ತುಗಳನ್ನು ನಾವು ನಮ್ಮ ಜೀವನದಲ್ಲಿ ಉಪಯೋಗಿಸಿಕೊಂಡಾಗ ಮಾತ್ರ ಪ್ರಕೃತಿಯನ್ನು ಚೆನ್ನಾಗಿ ಉಳಿಸಿಕೊಳ್ಳಬಹುದು ಮತ್ತು ಆರೋಗ್ಯವಂತ ಜೀವನವನ್ನು ನಡೆಸಲು ಪ್ರಯತ್ನಿಸೋಣ ಅಲ್ಲವೆ.
ಕಳೆದ ಸಂಚಿಕೆಯಲ್ಲಿ ಪ್ರಕಟವಾದ “ನಾವು ನೀವೆಲ್ಲರೂ ಮಾನವರಾಗೋಣ” ಎಂಬ ಆಶಯ ಲೇಖನದ ಮುಖಾಂತರ ಮಾನವ ಜೀವನದ ಮೌಲ್ಯಗಳನ್ನು ಎತ್ತಿ ತೋರಿಸಿದ ಪ್ರೊ. ಕೇಶವ ಎಚ್. ಇವರಿಗೂ “ಆಚಾರವಿಲ್ಲದ ನಾಲಿಗೆ” ಎಂಬ ಲೇಖನವನ್ನು ನೀಡಿರುವ ರಾಕೇಶ್ ಕುಮಾರ್ ಮತ್ತು “ವಿಶುಕುಮಾರ್ ಹೀಗೊಂದು ನೆನಪು”, ಲೇಖನ ನೀಡಿ ಯುವಸಿಂಚನವನ್ನು ಶೃಂಗಾರಗೊಳಿಸಲು ಪ್ರಾರಂಭಿಸಿರುವ ವಿಶುಕುಮಾರ್‍ರವರ ನಿಕಟವರ್ತಿ ರವಿರಾಜ ಅಜ್ರಿಯ ವರಿಗೂ ಯುವಸಿಂಚನ ಬಳಗದ ನಮನಗಳು. ಈ ಸಂಚಿಕೆಯಲ್ಲಿ ‘ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ’ ಎಂಬ ಆಶಯ ಲೇಖನ ದೊಂದಿಗೆ ನಮ್ಮ ವಿವಿಧ ಘಟಕಗಳ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ಚಿತ್ರಣ ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಅನಿಸಿಕೆ, ಸಲಹೆಗಳೇ ನಮಗೆ ರಕ್ಷೆ. ದಯವಿಟ್ಟು ಮಾತನಾಡಿಸುವಿರಿ ತಾನೆ?

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!