ಸಂಪಾದಕರ ಮಾತು : ಶುಭ ರಾಜೇಂದ್ರ

 

              ಶುಭ ರಾಜೇಂದ್ರ

ಯುವಸಿಂಚನದ ಓದುಗ ಮಿತ್ರರಿಗೆ ನಮಸ್ಕಾರಗಳು
ಕತ್ತಲಾಯಿತು ರಾತ್ರಿಯಾಗುತ್ತದೆ ಎನ್ನುವ ಭಯ ಬೇಡ ನಾಳೆ ಮತ್ತೆ ಸೂರ್ಯೋದಯವಿದೆ ಮತ್ತೆ ಹೊಸ ದಿನ ನಿಮ್ಮನ್ನು ಎದುರುಗೊಳ್ಳುತ್ತದೆ ಸಾಧಿಸಬೇಕೇÉ ಅನಿಸಿದರೆ ನಾಳಿನ ಅವಕಾಶÀವನ್ನು ಬಳಸಿಕೋ ಎಂದು ಲೇಖಕರ ಮಾತೊಂದು ನೆನಪಿಗೆ ಬರುತ್ತಿದೆ. ಯುವ ಸಿಂಚನಕ್ಕೆ ಹೊಸ ರೂಪ ನೀಡಬೇಕು ಎಂದು ಸಾಕಷ್ಟು ಪ್ರಯತ್ನದ ನಡುವೆಯೂ ಇನ್ನೂ ಚೆಂದವಾಗಿಸುವ ನಿಮ್ಮ ಅನಿಸಿಕೆಗಳು ನಮ್ಮನ್ನು ಪ್ರೇರೆಪಿಸುತ್ತದೆ ಆದರೆ ಅಷ್ಟರಲ್ಲಿ ಸಿಂಚನ ಅಚ್ಚಾಗಿರುತ್ತದೆ ಆಗ ನಮಗೆ ಸಮಾಧಾನ ಮಾಡುವುದು ಈ ಮೇಲಿನ ಮಾತು, ಮತ್ತೆ ನಾವು ನಾಳಿನ ಹೊಸತನಕ್ಕೆ ನಮ್ಮನ್ನು ಹೊಂದಿಸಿಕೊಳ್ಳುತ್ತೇವೆ. ಸ್ನೇಹಿತರೇ ಕಳೆದ ನಾಲ್ಕು ತಿಂಗಳಲ್ಲಿ ನೀವು ಏನೆಲ್ಲ ಸಲಹೆ ನೀಡಿದ್ದೀರೋ ಅದೆಲ್ಲವನ್ನೂ ಕೃತಜ್ಞತಾಪೂರ್ವಕವಾಗಿ ಸೇರಿಸಿಕೊಂಡು ಅಳವಡಿಸಿಕೊಂಡಿದ್ದೇವೆ. ಇದು ನಮ್ಮ ಯುವಸಿಂಚನ. ಇದನ್ನು ರೂಪಿಸುವವರೂ ನಾವೇ ಪ್ರತಿಯೊಬ್ಬರÀ ಸಲಹೆಯನ್ನೂ ಮಂಥಿಸಿ ನಿರ್ಮಾಣಗೊಂಡ ಮೂರ್ತರೂಪ ಈ ಬಾರಿಯ ಯುವಸಿಂಚನ.
ಯುವ ಸಿಂಚನದ ಜವಾಬ್ದಾರಿಯನ್ನು ನೀವು ಪಡೆದುಕೊಳ್ಳಬೇಕು ಎಂದು ಅಧ್ಯಕ್ಷರು ಹೇಳಿದಾಗ ಹಿಂಜರಿದಿದು ನಿಜ, ಆದರೆ ಯುವಸಿಂಚನ ಎರಡು ತಿಂಗಳಿಗೊಮ್ಮೆ ಎಂದಾಗ ನಿರಾಳವಾಗಿದ್ದೆ ಎರಡು ತಿಂಗಳ ಅವಕಾಶ ಇದೆಯಲ್ಲವೇ ಎಂದು, ಆದರೆ ಎರಡು ತಿಂUಳು ಬಿಡಿ ಎರಡು ದಿನದ ವಿಶ್ರಾಂತಿಯೂ ಇಲ್ಲದಂತೆ ಯುವಸಿಂಚನದ ಕೆಲಸ ಇದೆ, ಎಲ್ಲಾ ಘಟಕಗಳು ನಿರೀಕ್ಷೆಗೂ ಮೀರಿ ಸ್ಪಂದನೆ ನೀಡುತ್ತಿದ್ದಾರೆ ಹೀಗಿದ್ದರೂ ಕೆಲಸಗಳಿವೆ ಒಂದು ವೇಳೆ ಸ್ಪಂದನೆ ಕಡಿಮೆ ಇದ್ದರೆ ಈ ಜವಾಬ್ದಾರಿ ನಿಭಾಯಿಸುವುದು ಕಷ್ಟವೇ ಸರಿ.
ಪರಿವರ್ತನೆಯ ಹಾದಿಗೆ ನಾವೆಲ್ಲ ತುಂಬಾ ಹೊಂದಿಕೊಂಡಿದ್ದೇವೆ. ಎಲ್ಲಾ ಘಟಕಗಳು ಬಿಡುವಿಲ್ಲದ ಕೆಲಸದಲ್ಲಿದೆ, ಕೇಂದ್ರ ಸಮಿತಿಯ ಅಧ್ಯಕ್ಷರು ಗ್ರಾಮ ವಾಸ್ತವ್ಯ ಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎನ್ನುವಷ್ಟು ಘಟಕಗಳು ಕಾರ್ಯಕ್ರಮ ನೀಡುತ್ತಿದೆ. ಸೂರ್ಯ ಮೂಡುವ ಮುನ್ನ ಹೊರಟರೇ ಮತ್ತವರು ಮನೆ ಸೇರುವುದು ಸೂರ್ಯ ಅಸ್ತಮಿಸಿದ ಮೇಲೆಯೇ ಅಲ್ಲೂ ಅವರದ್ದು ಯುವವಾಹಿನಿಯದ್ದೇ ಚಿಂತನೆ, ಅವರು ಯುವವಾಹಿನಿಯ ಪಾದರಸ. ಈ ಕಾರಣದಿಂದ ಯುವವಾಹಿನಿ ಇಂದು ಎಲ್ಲರ ಮನದಲ್ಲಿ ಭದ್ರವಾಗಿದೆ.
ಕಳೆದ ಬಾರಿಯ ಯುವಸಿಂಚನದ ಆರ್ಥಿಕ ಭಾರ ತಗ್ಗಿಸಿದವರು ಯುವವಾಹಿನಿ ಮೂಲ್ಕಿ ಘಟಕದವರು. ಬಹುಷಃ ಮೂಲ್ಕಿಯವರ ಸಹಕಾರದಿಂದ ಆರ್ಥಿಕ ಹೊರೆಯ ಬಿಸಿ ಇಲ್ಲದೆ ನಿರಾಳವಾಗಿ ಸಿಂಚನ ರೂಪಿಸುವಂತಾಯಿತು.. ನಿರೀಕ್ಷೆಯಂತೆ ಕೇಂದ್ರ ಸಮಿತಿಯ ಎಲ್ಲಾ ಘಟಕದ ವರದಿಯೂ ಕಾರ್ಯಕ್ರಮದ ವಿವರವೂ ಯುವ ಸಿಂಚನದಲ್ಲಿ ದಾಖಲಾಗಿದೆ. ಕೇಂದ್ರ ಸಮಿತಿಯ ಚತುರ್ಮುಖ ಮತ್ತು ಬಂಟ್ವಾಳ ಘಟಕದ ಅನ್ವೇಷಣಾ, ಪುತ್ತೂರು ಘಟಕದ ಕೆಸರುಗದ್ದೆ ಕ್ರೀಡಾಕೂಟ, ಮಹಿಳಾ ಘಟಕದ ವಧುವರಾನ್ವೇಷಣಾ ಕಾರ್ಯಕ್ರಮ, ಬಂಟ್ವಾಳ ಘಟಕದ ಡೆನ್ನಾನ ಡೆನ್ನನ-2018 ಯುವಸಿಂಚನದ ಅಂದ ಹೆಚ್ಚಿಸಿದೆ. ಈ ಬಾರಿಯ ಯುವ ಸಿಂಚನಕ್ಕೆ ಕಥೆ, ಕವನ, ಲೇಖನ, ಆಶಯ ನೀಡಿದ ಎಲ್ಲರಿಗೂ ನನ್ನ ಮನದಾಳದ ವಂದನೆಗಳು. ನಿಮ್ಮ ಸಹಕಾರ ಎಂದಿಗೂ ಇರಲೆಂದು ಆಶಿಸುತ್ತಾ ಮಾತಿನಿಂದ ವಿರಮಿಸುತ್ತೇನೆ.
– ಸಂಪಾದಕರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!