ಯುವವಾಹಿನಿ ಯುವ ಸಾಧನಾ ಪುರಸ್ಕಾರ -2014

ರಾಜ್ಯಮಟ್ಟದ ಬೆಳ್ಳಿಪದಕ ವಿಜೇತ ಗೃಹರಕ್ಷಕಿ ಕು| ಲೀಲಾ ಎಸ್. ಕುಕ್ಯಾನ್

ಕು| ಲೀಲಾ ಎಸ್. ಕುಕ್ಯಾನ್

ಇವರ ವ್ಯಕ್ತತ್ವವೇ ವಿಶೇಷ, ತಾನೇನು?, ತನ್ನ ಪ್ರತಿಭೆ ಎಂತಹುದು ಎನ್ನುವ ಯಾವ ಸುಳಿವನ್ನೂ ನೀಡದೆ, ರಾಜ್ಯ ಮತ್ತು ರಾಷ್ಟ್ರ ಮನ್ನಣೆಯೊಂದಿಗೆ ಬೆಳ್ಳಿ ಪದಕವನ್ನು ತನ್ನ ನಿಷ್ಕಾಮ ಸೇವೆಯ ಗೃಹರಕ್ಷಕ ದಳದ ಪ್ರಥಮ ಚಿಕಿತ್ಸೆ ತರಬೇತಿಗಾಗಿ ಪಡೆದವರು. ಅಲ್ಲದೆ ತನ್ನ ನಾಯಕತ್ವದ ತಂಡವು ಇಲಾಖೆಯ ವಿವಿಧ ಚಟುವಟಿಕೆಗಳ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಕಂಚಿನ ಪದಕವನ್ನು ಪಡೆದಿರುತ್ತದೆ. ಯುವವಾಹಿನಿಯ ಜೊತೆಗೆ ಹದಿನೈದಕ್ಕೂ ಅಧಿಕ ವರುಷದ ಸೇವೆಯನ್ನು ಯಾವುದೇ ಕುಂದು ಇರದ ರೀತಿಯಲ್ಲಿ ನೀಡುತ್ತಾ ಬಂದರೂ, ತಾನು ಪಡೆದ ಪುರಸ್ಕಾರಗಳ ಬಗ್ಗೆ ಪ್ರಚಾರವನ್ನೇ ನೀಡದೆ, ಪುರಸ್ಕಾರಗಳು ಹೆಗಲ ಮೇಲೆ ಬೀಳುವ ಜವಬ್ದಾರಿ ಎನ್ನುವ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿರುವ ಸಾಧಕಿ ಕು| ಲೀಲಾ ಎಸ್. ಕುಕ್ಯಾನ್ ಅವರು. ಸಣ್ಣ ಬಹುಮಾನ ಪಡೆದರೂ ಅಬ್ಬರದ ಪ್ರಚಾರ ಪಡೆಯುವ ಜನರ ನಡುವೆ ರಾಜ್ಯ ಮಟ್ಟದ ಪುರಸ್ಕಾರ ದೊರೆತರೂ ಹೇಳಿಕೊಳ್ಳದೆ ಬರೇ ನಗುವಿನ ಮೂಲಕವೇ ಸಂತೃಪ್ತಿ ಸೂಸುವ ಲೀಲಾ ಎಸ್. ಕುಕ್ಯಾನ್ ಯುವವಾಹಿನಿಯ ಆಸ್ತಿ ಎಂದರೂ ತಪ್ಪಾಗಲಾರದು. ಗೌರವಾನ್ವಿತ ಸೇವಾ ಸಂಸ್ಥೆ ಗೃಹ ರಕ್ಷಕ ದಳದಲ್ಲಿ ಎರಡು ದಶಕದಿಂದ ಸೇವೆ ಸಲ್ಲಿಸಿ, ಸಂಚಾರ ನಿಯಂತ್ರಣ, ಕಾನೂನು ಸುವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ವಿಭಾಗದಲ್ಲಿ ತರಬೇತಿ ಪಡೆದು, ಕಾರ್ಯನಿರ್ವಹಿಸುತ್ತಾ ಇಲಾಖೆಯಿಂದ ಪ್ರಶಂಸೆಯನ್ನೂ ಪಡೆದಿದ್ದಾರೆ. ತನ್ನ ಸ್ವಂತ ಕೆಲಸದ ನಡುವೆ ಗೃಹ ರಕ್ಷಕ ಬಳಗದಿಂದ ಕರೆ ಬಂದಾಗ ತನ್ನ ಎಲ್ಲಾ ಕೆಲಸವನ್ನೂ ಬದಿಗೊತ್ತಿ ಬರುವ ಲೀಲಾ ಎಸ್.ಕುಕ್ಯಾನ್ ಮಳೆ, ಗಾಳಿ, ಬಿಸಿಲು ಎನ್ನದೆ ರಸ್ತೆ ಬದಿ ನಿಂತು ಸಂಚಾರ ಸುಗಮ ಕೆಲಸವನ್ನು ಯಾವುದೇ ನೋವಿಲ್ಲದೆ ನಡೆಸಿದ್ದಾರೆ. ಮೆರವಣಿಗೆ, ಜಾತ್ರೆ, ಹಬ್ಬಗಳ ಸಮಯದಲ್ಲೂ ತನ್ನೆಲ್ಲ ಸಂಭ್ರಮವನ್ನು ಬದಿಗಿರಿಸಿ ಸಾಮಾಜಿಕ ಸೇವೆ ನಡೆಸುತ್ತಿರುವ ಲೀಲಾ ಎಸ್.ಕುಕ್ಯಾನ್ ವಿವಿಧ ಪೊಲೀಸ್ ಠಾಣೆಗಳಲ್ಲೂ ಕೆಲಸ ನಿರ್ವಹಿಸಿದ್ದಾರೆ. ಇದಲ್ಲದೆ ಗೃಹರಕ್ಷಕಿಯಾಗಿ ಮಂಗಳೂರು ಸಬ್ ಜೈಲಿನಲ್ಲಿ ಖೈದಿಗಳ ನಡುವೆಯೂ ಕೆಲಸ ಮಾಡಿರುವ ಇವರು ಖೈದಿಗಳ ನೋವಿಗೂ ಸ್ಪಂದಿಸಿದವರಾಗಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಕಾರ್ಯ (ಐಚಿಜಜeಡಿ ಅheಛಿಞiಟಿg)ವನ್ನು ನಿರ್ವಹಿಸಿರುತ್ತಾರೆ. ತುರ್ತು ಸಂದರ್ಭದಲಿ,್ಲ ಅವಘಡಗಳು ನಡೆದ ವೇಳೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸವನ್ನೂ ನಡೆಸಿದ್ದಾರೆ. ಯುವವಾಹಿನಿಗರ ನಡುವೆ ನೆಚ್ಚಿನ ಸಹೋದರಿಯಾಗಿ, ಸಾಂಸ್ಕøತಿಕ ರಂಗದಲ್ಲಿನ ವಿಶಿಷ್ಟ ಪ್ರತಿಭೆಯಾಗಿ, ಕ್ರೀಡಾ ರಂಗದಲ್ಲೂ ಹೆಸರು ಮಾಡಿರುವ ಲೀಲಾ ಎಸ್.ಕುಕ್ಯಾನ್ ಇವರ ಸಾಧನೆಯನ್ನು ಗುರುತಿಸಿ ಯುವವಾಹಿನಿಯ 27ನೇ ವಾರ್ಷಿಕ ಸಮಾವೇಶದಲ್ಲಿ 2014 ನೇ ಸಾಲಿನ ಯುವವಾಹಿನಿ ‘ಯುವ ಸಾಧನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಯುವವಾಹಿನಿಯು ಸಂತೋಷ ಪಡುತ್ತಿದೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 25-12-2024
ಸ್ಥಳ : ಯುವವಾಹಿನಿ ಸಭಾಂಗಣ ಊರ್ವಸ್ಟೋರ್

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ದಿನಾಂಕ : 21-12-2024
ಸ್ಥಳ : ಹೆಚ್. ಎಂ. ಆಡಿಟೋರಿಯಂ ಉಪ್ಪಿನಂಗಡಿ

ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ

ದಿನಾಂಕ : 22-12-2024
ಸ್ಥಳ : ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣ ಕಡಬ

ಯುವವಾಹಿನಿ (ರಿ.) ಕಡಬ ಘಟಕ

ದಿನಾಂಕ : 20-12-2024
ಸ್ಥಳ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ

ಯುವವಾಹಿನಿ (ರಿ) ಅಡ್ವೆ ಘಟಕ

ದಿನಾಂಕ : 29-12-2024
ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
error: Content is protected !!