ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿ ಯೋಜನೆಗೆ ದೇಣಿಗೆಯ ಹಸ್ತಾಂತರ

ಕೊಲ್ಯ : ಯುವವಾಹಿನಿ (ರಿ)ಕೊಲ್ಯ ಘಟಕದ ಶಾಶ್ವತ ವಿದ್ಯಾ ನಿಧಿ ಯೋಜನೆಯ ಸದಸ್ಯರಾದ ಶ್ರೀ ಶ್ರೀ ಮುತ್ತಪ್ಪ ಪೂಜಾರಿ ಮತ್ತು ಶ್ರೀಮತಿ ಸುಜಾತ ಎಚ್.ಕೆ.ದಂಪತಿಗಳ ಕುಟುಂಬ ಸದಸ್ಯರ ಸಹಕಾರದೊಂದಿಗೆ ವಿದ್ಯಾ ನಿಧಿಗೆ ದೇಣಿಗೆಯ ಹಸ್ತಾಂತರ ಕಾರ್ಯಕ್ರಮವು ದಿನಾಂಕ 26-12-2018 ನೇ ಬುಧವಾರದಂದು ಸಾಯಂಕಾಲ ಮುತ್ತಪ್ಪ ಪೂಜಾರಿಯವರ ಹಿರಿಯ ಮುಂದಾಳುತ್ವದಲ್ಲಿ ಅವರ ನಿವಾಸ ಕುಂಪಲದಲ್ಲಿ ಜರಗಿತು.
ಸಮಾಜದ ಹಿರಿಯ ಮಹಾನ್ಚೇತನ ಬಲಿಷ್ಠ ಭಾರತದ ಸ್ವಾತಂತ್ರ್ಯ ಹೋರಾಟಗಾರ 93 ವರ್ಷ ಹರೆಯದ ಮಂಗಳೂರು ಬಳ್ಳಾಲ್ ಭಾಗ್ ನಿವಾಸಿ ಎಚ್ .ಜಿ. ಕೃಷ್ಣಪ್ಪ ರವರ ಸುಪುತ್ರ ಸುಂದರೇಶ್ ಎಚ್.ಕೆ. ಮತ್ತು ಮಂಜುಳಾ ಸುಂದರೇಶ್ ಮೊಮ್ಮಗ ಅನೀಶ್ ಸುಂದರೇಶ್ ಇವರು ತನ್ನ ಮಾತ ಪಿತ ರ ಹೆಸರಲ್ಲಿ ವಿದ್ಯಾನಿಧಿಗೆ ದೇಣಿಗೆಯನ್ನು ನೀಡಬೇಕೆಂಬ ಸದಾಶಯವನ್ನು ಮನದಲ್ಲಿ ನಿಶ್ಚಯಿಸಿದ ಪ್ರಕಾರ ಇವರ ಕುಟುಂಬ ಸದಸ್ಯರಾದ ಚಂದ್ರಹಾಸ್ ಇಡ್ಯಾ ಮತ್ತು ಸತ್ಯವತಿ ಚಂದ್ರಹಾಸ್ ಇಡ್ಯಾ ಕುಂಪಲ, ವಸಂತ ಪೂಜಾರಿ ಮೈಸೂರು , ರಾಮಸ್ವಾಮಿ ಮತ್ತು ಸ್ವಾತಿ ರಾಮಸ್ವಾಮಿ ಬೆಂಗಳೂರು ಇವರ ಸಂಪೂರ್ಣ ಸಹಕಾರದೊಂದಿಗೆ “ಇಪ್ಪತ್ತು ಸಾವಿರ” ರೂಪಾಯಿ ಮೊತ್ತದ ದೇಣಿಗೆಯನ್ನು ಕುಟುಂಬದ ಹಿರಿಯರಾದ ಮಹಾನ್ ಚೇತನ ಎಚ್. ಜಿ.ಕೃಷ್ಣಪ್ಪ ರವರ ದಿವ್ಯ ಹಸ್ತದಿಂದ ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ ಕುಂಪಲ ಹಾಗೂ ವಿದ್ಯಾ ನಿಧಿಯ ನಿರ್ದೇಶಕರಾದ ದೀಪಕ್ .ಎಸ್.ಕೋಟ್ಯಾನ್, ಕೋಶಾಧಿಕಾರಿ ರಘುರಾಮ ಸುವರ್ಣರವರಿಗೆ ಹಸ್ತಾಂತರಿಸಿದರು
ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿಯ ಸದಸ್ಯರಾದ ಮುತ್ತಪ್ಪ ಪೂಜಾರಿ ಕುಂಪಲ, ಈಶ್ವರ್ ಸುವರ್ಣ ಕನೀರುತೋಟ,ಕೊಲ್ಯ ಘಟಕದ ಪ್ರಧಾನ ಕಾರ್ಯದರ್ಶಿ ಲತೀಶ್ ಪಾಪುದಡಿ, ಜೊತೆ ಕಾರ್ಯದರ್ಶಿ ಯತೀಶ್ ಕೊಲ್ಯ, ಸದಸ್ಯರಾದ ಗೋಕುಲ್ ದಾಸ್ ಕುಂಪಲ ರವರು ಹಾಗೂ ದೇಣಿಗೆ ನೀಡಿದ ಕುಟುಂಬ ಸದಸ್ಯರು ಉಪಸ್ಥಿತರಿದ್ದ ಸರಳ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಕುಸುಮಾಕರ ಕುಂಪಲರವರು ಹಿರಿಯ ದಂಪತಿಗಳನ್ನು ಹಾಗೂ ಕುಟುಂಬ ಸದಸ್ಯರನ್ನು ಸ್ವಾಗತಿಸಿ ಶಾಶ್ವತ ವಿದ್ಯಾನಿಧಿಯ ಹುಟ್ಟು , ಭವಿಷ್ಯದಲ್ಲಿ ಇದರ ಬೆಳವಣಿಗೆ ಹಾಗೂ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ವಿತರಿಸುವ ರೀತಿ , ನಿಯಮಗಳನ್ನು ಕುಟುಂಬ ಸದಸ್ಯರಿಗೆ ಪ್ರಾಸ್ತಾವಿಕವಾಗಿ ತಿಳಿಯಪಡಿಸಿ ಅವರು ನೀಡಿದ ಮೊತ್ತವನ್ನು ಗೌರವಪೂರ್ಣವಾಗಿ ಘಟಕವು ಸ್ವೀಕರಿಸಿತು.ದೇಣಿಗೆಯನ್ನು ನೀಡಿದ ಕುಟುಂಬ ಸದಸ್ಯರಿಗೆ ಶಾಶ್ವತ ವಿದ್ಯಾನಿಧಿಯ ಸದಸ್ಯತ್ವದ ಲಾಂಛನವನ್ನು ತೊಡಿಸಿ ಶಾಶ್ವತ ವಿದ್ಯಾ ನಿಧಿ ಯೋಜನೆಗೆ ಘಟಕದ ಸದಸ್ಯರಿಂದ ಅವರನ್ನು ಸದಸ್ಯರನ್ನಾಗಿ ಸ್ವಾಗತಿಸಲಾಯಿತು.

ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾ ನಿಧಿ ಯೋಜನೆಯ ಈ ಮಹತ್ಕಾರ್ಯಕ್ಕೆ ನಮ್ಮನ್ನು ಅನಿರೀಕ್ಷಿತವಾಗಿ ಈ ಕುಟುಂಬವು ಮನೆಗೆ ಕರೆಸಿ ಶಾಶ್ವತ ವಿದ್ಯಾ ನಿಧಿ ಯೋಜನೆಯು ಇನ್ನಷ್ಟು ಬೆಳಗಲು, ಅಪೇಕ್ಷಿಸದೆ ನಿರೀಕ್ಷಿಸದ ಮೊತ್ತವನ್ನು ನೀಡಿ ಸಹಕರಿಸಿದ ಈ ಸುಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಎಚ್.ಜಿ.ಕೃಷ್ಣಪ್ಪ ಮತ್ತು ಸುಶೀಲಾ ಕೃಷ್ಣಪ್ಪ ರವರನ್ನು ಘಟಕದ ವತಿಯಿಂದ ಗೌರಪೂರ್ಣವಾಗಿ ಅಭಿನಂದಿಸಲಾಯಿತು. ಪ್ರೋತ್ಸಾಹಿಸಿದ ಕುಟುಂಬದ ಸರ್ವ ಸದಸ್ಯರಿಗೆ ಯುವವಾಹಿನಿ(ರಿ) ಕೊಲ್ಯ ಘಟಕ ಹಾಗೂ ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿಯ ಸರ್ವ ಸದಸ್ಯರ ಪರವಾಗಿ ಘಟಕದ ಪ್ರಧಾನ ಕಾರ್ಯದರ್ಶಿ ಲತೀಶ್ ಪಾಪುದಡಿ ಧನ್ಯತಾಭಾವದಿಂದ ಧನ್ಯವಾದವನ್ನಿತ್ತರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!