ಯುವವಾಹಿನಿ(ರಿ) ಹಳೆಯಂಗಡಿ ಘಟಕ

ಯುವವಾಹಿನಿ(ರಿ) ಹಳೆಯಂಗಡಿ ಘಟಕದಿಂದ ಉಚಿತ ಪುಸ್ತಕ ವಿತರಣೆ

ಯುವವಾಹಿನಿ(ರಿ) ಹಳೆಯಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ: 12-6-2016 ರಂದು ಹಳೆಯಂಗಡಿ ಬಿಲ್ಲವ ಸಂಘದ ಸಭಾಗೃಹದಲ್ಲಿ ಕೊಲ್ನಾಡು ದಿ! ಕಮಲ ಬೂಬ ಅಮೀನ್‌ರವರ ಸ್ಮರಣಾರ್ಥ ಅವರ ಮಕ್ಕಳಿಂದ (ಪೂಜಾ ಎರೇಂಜರ್‍ಸ್ & ಕೆಟರರ್‍ಸ್) ಇವರ ಪ್ರಾಯೋಜಕತ್ವದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ.ಗಣೇಶ್ ಜಿ. ಬಂಗೇರ ವಹಿಸಿದರು.

ಶ್ರೀ ಜೈಕೃಷ್ಣ ಬಿ. ಕೋಟ್ಯಾನ್, ಮಾಲಕರು ಪೂಜಾ ಎರೇಂಜರ್‍ಸ್ & ಕೆಟರರ್‍ಸ್ ಹಳೆಯಂಗಡಿ ಇವರು ಹಳೆಯಂಗಡಿ ಸುತ್ತಮುತ್ತಲ್ಲಿನ 41 ಅರ್ಹ ಶಾಳಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸುಮಾರು 25000/- ಮೊತ್ತದ ಉಚಿತ ಪುಸ್ತಕವನ್ನು ವಿತರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ. ವಿನೋದ್ ಕುಮಾರ್ ಬೊಳ್ಳೂರು ಹಾಗೂ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ. ಸಂತೋಷ್ ಕುಮಾರ್ ಭಾಗವಹಿಸಿದರು. ಯುವಾಹಿನಿ(ರಿ) ಹಳೆಯಂಗಡಿ ಘಟಕದ ಅಧ್ಯಕ್ಷರಾದ ಶ್ರೀ.ದೀಪಕ್ ನಾನಿಲ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಘಟಕದ ಸದಸ್ಯರಾದ ಶ್ರೀ.ರಮೇಶ್ ಬಂಗೇರ ಸ್ವಾಗತಿಸಿ, ಹಿಮಕರ್ ಟಿ. ಸುವರ್ಣ ವಂದಿಸಿದರು. ಶ್ರೀಮತಿ ರಶ್ಮಿಶರತ್ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!