ಯುವವಾಹಿನಿ ಕೂಳೂರು ಘಟಕದ

ಪದಗ್ರಹಣ ಸಮಾರಂಭ

ಯುವವಾಹಿನಿ (ರಿ.) ಕೂಳೂರು ಘಟಕದ 2022-23 ನೇ ಸಾಲಿನ 7 ನೇ ಪದಗ್ರಹಣ ಕಾರ್ಯಕ್ರಮಕ್ಕೆ ದಿನಾಂಕ 06-02-2022 ರ ಭಾನುವಾರದಂದು ಕೂಳೂರು ಮಿನಿ ಚರ್ಚ್ ಹಾಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮವನ್ನು ಶ್ರೀ ಗೋಕರ್ಣಾಥ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಎಚ್.ಎಸ್ ಸಾಯಿರಾಮ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಸಮಾಜಮುಖಿ ಕಾರ್ಯಗಳೊಂದಿಗೆ ಯುವಕರ ಯುವವಾಹಿನಿ ತಂಡವು ಇನ್ನಷ್ಟು ಬಲಿಷ್ಠ ಗೊಳ್ಳಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಮೂತ್ರ ರೋಗ ತಜ್ಞರಾದ ಡಾ. ಸದಾನಂದ ಪೂಜಾರಿ 2021-22 ಸಾಲಿನ ಕಾರ್ಯಕ್ರಮಗಳ ಬಗೆಗಿನ *ಮಾತೃಸ್ಪರ್ಶ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಸಜ್ಜನರ ಸಂಗ ಮಾಡಿದರೆ ಆಗುವ ಲಾಭದ ಬಗ್ಗೆ ಉತ್ತಮ ನಿದರ್ಶನದ ಮೂಲಕ ವಿವರಿಸಿ ನಮ್ಮ ಯುವವಾಹಿನಿ ಕೂಡ ಒಂದು ಸಜ್ಜನರ ಸಂಗ ಇದ್ದಂತೆ ಎಂದು ಹೇಳಿ ಯುವವಾಹಿನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಘಟಕದ ಅಧ್ಯಕ್ಷರಾದ ಶ್ರೀಮತಿ ನಯನರಮೇಶ್ ಸಭೆಯ ಅಧ್ಯಕ್ಷತೆ ವಹಿಸಿ ವರದಿ ವರ್ಷದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರೋಹಿತ್ 2021-22 ಸಾಲಿನ ವಾರ್ಷಿಕ ವರದಿ ಮಂಡಿಸಿದರು.

ಘಟಕದ ವತಿಯಿಂದ ಸೇವಾನಿಧಿ ಯೋಜನೆಯಲ್ಲಿ ರಾಜೇಶ್ ಪೂಜಾರಿ ಹಾಗೂ ಕಾವ್ಯ ದಂಪತಿಗಳ ಮಗುವಿನ ಚಿಕಿತ್ಸೆಗೆ ಸಹಾಯ ಧನ ರೂ. 11600/-ನ್ನು ಹಸ್ತಾಂತರಿಸಲಾಯಿತು. ಪದವಿ ಶಿಕ್ಷಣದಲ್ಲಿ ಉತ್ತಮ ಅಂಕಗಳಿಸಿದ ಇಬ್ಬರು ವಿದ್ಯಾರ್ಥಿಗಳಾದ ಸುಶ್ಮಿತ ಹಾಗೂ ಭೂಮಿಕಾ ರನ್ನು ಗೌರವಿಸಲಾಯಿತು. ನಂತರ 2022-23 ಸಾಲಿನ ನೂತನ ಪದಾಧಿಕಾರಿಗಳ ಘೋಷಣೆ ಯನ್ನು ಚುನಾವಣಾಧಿಕಾರಿ ಲೋಕೇಶ್ ಕೋಟ್ಯಾನ್ ನೆರವೇರಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ಘಟಕಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷರಾಗಿ ದೀಕ್ಷಿತ್ ಸಿ ಎಸ್ ಒಂದನೇ ಉಪಾಧ್ಯಕ್ಷರಾಗಿ ನಿಶಿತ್ ಪೂಜಾರಿ ಎರಡನೇ ಉಪಾಧ್ಯಕ್ಷರಾಗಿ ಯಶವಂತ್ ಪೂಜಾರಿ ಕಾರ್ಯದರ್ಶಿಯಾಗಿ ಸುಮಾಶಿವು ಕೋಡಿಕಲ್ ಜೊತೆ ಕಾರ್ಯದರ್ಶಿಯಾಗಿ ತುಳಸಿ ಸುಜೀರ್ ಕೋಶಾಧಿಕಾರಿಯಾಗಿ ರಕ್ಷಾ ಜೆ ಜೊತೆ ಕೋಶಾಧಿಕಾರಿಯಾಗಿ ನೈನಾ ಕೋಟ್ಯಾನ್ ಹಾಗೂ ಇತರ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು.

ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮತಿ ನಯನರಮೇಶ್ ಹಾಗೂ ಕಾರ್ಯದರ್ಶಿ ರೋಹಿತ್ ರವರನ್ನು ಅಭಿನಂದಿಸಲಾಯಿತು. ನಿರ್ಗಮನ ಅಧ್ಯಕ್ಷರಾದ ನಯನರಮೇಶ್ ಮಾತನಾಡಿ ಬಚ್ಚಿಟ್ಟ ಜ್ಞಾನವು ಕೊಳೆಯುತ್ತದೆ, ಬಿಚ್ಚಿಟ್ಟ ಜ್ಞಾನವು ಹೊಳೆಯುತ್ತದೆ ಎನ್ನುವ ಹಾಗೆ ಯುವವಾಹಿನಿಯಲ್ಲಿ ಮಾಜಿ ಅಧ್ಯಕ್ಷರುಗಳು ತಮ್ಮಲ್ಲಿ ಇರುವ ಜ್ಞಾನವನ್ನು ಮುಂದಿನ ಅಧ್ಯಕ್ಷರಿಗೆ ಧಾರೆ ಎರೆಯುತ್ತಾರೆ. ತನ್ನ ಅವಧಿಯಲ್ಲಿ ತನಗೆ ಸಹಕರಿಸಿದ ಸ್ಥಾಪಕ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು , ಮಾರ್ಗದರ್ಶಕರು, ಹಿರಿಯ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆ ತಿಳಿಸಿದರು. ನಂತರ ಇತರ ಘಟಕದಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು ಘಟಕದ ಸದಸ್ಯರಾದ ಸ್ವಾತಿ, ಸೃಜನಿ, ಹರ್ಷಿಣಿ, ಸುಶ್ಮಿತ ಪ್ರಾರ್ಥಿಸಿದರು. ಅಧ್ಯಕ್ಷರಾದ ನಯನರಮೇಶ್ ಸ್ವಾಗತಿಸಿದರು .ಸಂಚಾಲಕ ಸಚಿನ್ ಪೂಜಾರಿ ವಂದಿಸಿದರು. ಕಾಯ೯ಕ್ರಮವನ್ನು ಶೈಲೇಶ್ ಬೈಕಂಪಾಡಿ, ರಕ್ಷಾ, ಸುಮಂಗಲಾ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!