ಯುವವಾಹಿನಿ (ರಿ) ಉಡುಪಿ ಘಟಕ

ಅಂತರಂಗದಲ್ಲಿ ತಣ್ಣಗೆ ಹರಿದಾಡಿ ಮುದಗೊಳಿಸಿದ ಸಖೀ ಸಂವಾದ : ಪೂರ್ಣಿಮಾ ಸುರೇಶ್

ಪೂರ್ಣಿಮಾ ಸುರೇಶ್

ಸಖ್ಯ ಸುಖಕೆ ಪರಿಧಿ ಇದೆಯೇ? ಅಂತರಂಗದಲಿ ತಣ್ಣಗೆ ಹರಿದಾಡಿ ಮುದಗೊಳಿಸಿ,ಹಿತಾನುಭವ ಜೊತೆಜೊತೆಗೆ ಭದ್ರತೆಯ ಭಾವ ಉಣಿಸಿ ಸಮೃದ್ಧಗೊಳಿಸುವುದು.ಅಂತೇ ಸಖಿ- ಸಖ ಪದಗಳು ಪಂಚೇಂದ್ರಿಯಗಳ ಮುಟ್ಟಿದರೆ ಉಲ್ಲಾಸ. ತಂಗಾಳಿ ಸ್ಪರ್ಶಿಸಿದಂತೆ.
ಈ ಭಾವ ನೆನಕೆಗೆ ದಿನಾಂಕ‌08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನೆನಪಿನಲ್ಲಿ ” ಸಖೀ ಸಂವಾದ” ಅರಳಿಸುವ ಜವಾಬ್ದಾರಿಯನ್ನ ನಿಭಾಯಿಸಿತ್ತು.

ಹೆಸರಿನಲ್ಲೇ ಹೂವಿನಲಿ ಅಡಗಿಹ ಗಂಧದ ಸೆಳೆತ ..ಕರೆದವರು ಸಖೀ ಅಮಿತ. ವೇದಿಕೆಯಲ್ಲಿ ಸಂವಾದ, ಮಾತು, ಹರಟೆ, ಕನಸು ಎನ್ನುತ್ತ ನನ್ನ ಅಕ್ಕ ಪಕ್ಕ ಕೂತು ಹೆಣ್ಣಿನ ಸಮಸ್ಯೆ, ಜವಾಬ್ದಾರಿ, ಮನಸ್ಸು ಯೋಚನೆ..ಆಕೆಯ ಸಮಾಜಮುಖಿ ನಡೆ, ಗೌರವಿಸಲ್ಪಡುವ- ಘಾಸಿಗೊಳ್ಳುವ ಹೆಣ್ತನ, ಆಕೆಯ ವೃತ್ತಿ- ಪೃವೃತ್ತಿ..ಹೀಗೆ ತಮ್ಮೊಳಗನ್ನ ಹರವಿ ಸಂವಾದದ ಬೆಡಗನ್ನೂ ಹೆಚ್ಚಿಸಿ ನಿಜ ಅರ್ಥದಲ್ಲಿ ಪರಿಪೂರ್ಣಗೊಳಿಸಿದವರು ಈ ಸಾಧಕಿಯರು.

ಸುಮಾರು 3 ತಾಸುಗಳ ಕಾಲ ಅಂತರಂಗದ ರಿಂಗುಣಿತ ನಾದ ವೀಕ್ಷಕ,ಪ್ರೇಕ್ಷಕರನ್ನು ಹೊರಹೋಗದಂತೆ ತಡೆದು ಕೂರಿಸಿತು. ಭಾವ ನಶೆ, ವಾಸ್ತವದ ಸಜೀವ ಚಿತ್ರ ಚಿತ್ರಿಸುತ್ತ ..ಪ್ರತಿಸ್ಪಂದನವನ್ನೂ ಜೊತೆಜೊತೆಗೆ ಆಯುತ್ತ ನಡೆದ ನಡೆ ಇದಾಗಿತ್ತು. ಇದು ವಾದ- ಪ್ರತಿವಾದದ ಅಂಗಣವಾಗಿರಲಿಲ್ಲ. ಯಾವುದೋ ಸುಂದರ ಗೀತೆಯ ನೆನಪಿಸುತ್ತಾ ಗುನುಗುತ್ತಾ..ದಡದಲ್ಲಿರುವವರನ್ನೂ ತನ್ನಜೊತೆ ಕರೆದೊಯ್ಯುವ ನನ್ನೂರ ಹೊಳೆ ನೆನಪಾಯಿತು. ಇಲ್ಲೂ ಒಂದಿಷ್ಟು ಸಾತ್ವಿಕ ಆಕ್ರೋಶದ ಕಿಡಿ, ಅಸಾಯಕತೆಗಳು ಜೊತೆಜೊತೆಗೆ ಭರವಸೆ, ಬುಟ್ಟಿ ಪ್ರೀತಿ,ವಾತ್ಸಲ್ಯಗಳನ್ನೂ ಮನಸುಗಳಿಗೆ ರವಾನಿಸುವ ಕಾರ್ಯ ನಡೆದಿತ್ತು. ಬೆಳಕ ಉಂಡು, ಬೆಳಕು ತುಂಬುವ ಅನುಭಾವದ ಹೊಳಹು.
ವೇದಿಕೆಯಲ್ಲಿ ವೃತ್ತಿ ಗಾಂಭೀರ್ಯ ಉಟ್ಟು ಸಮವಸ್ತೃದಲ್ಲಿ ಪೋಲಿಸ್ ಠಾಣಾಧಿಕಾರಿ ಮುಕ್ತಾ, ಕಲಾವಿದೆ ಗೆಳತಿ ಮಾನಸಿ ಸುಧೀರ್, ಉಪನ್ಯಾಸಕಿ ಸಾಹಿತ್ಯದ ಎಳೆಎಳೆ ಬಿಡಿಸಿಡುವ ಸುಧಾರಾಣಿ, ಆಪ್ತ ಸಮಾಲೋಚಕಿ ಶಿಲ್ಪಾ ಜೋಷಿ, ಕನಸುಗಳನ್ನ ಕನಸುಗಳಾಗಿಯೇ ಇರಿಸದಿರಿ ಎನ್ನುತ್ತ ನಾಯಕತ್ವದ ಮಂತ್ರವನು ಮಹಿಳೆಯರಲಿ ತುಂಬುವ ಉದ್ಯಮಿ ರೇಣು ಜಯರಾಮ್ ಇವರೆಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದರು. ಎಲ್ಲರೂ ವ್ಯಕ್ತಿತ್ವವನು ಸುಂದರವಾಗಿ ಅರಳಿಸಿಕೊಂಡವರು . ಇವರ ನಡುವಿನಲಿ ಸಮನ್ವಯಕಾರಳಾಗಿ ನಾನು ಕೂತಿದ್ದು ….ನನ್ನ ಕೂರಿಸಿದ್ದು ಗೆಳತಿಯರಾದ ಸಂಧ್ಯಾ ಹಾಗೂ ಅಮಿತ. ಅವರಿಬ್ಬರಿಗೂ ಅಮಿತ ವಂದನೆಗಳು.

ಇದು ಸುಂದರವಾದ ಭಾವದೊಡ್ಡೋಲಗ..ನೆನಪಿನ ತೇರು ಸಾಗುತ್ತಲೇ ಇದೆ…ಮನಸಿಗಂಟಿರುವ ಪರಿಮಳ ಅಳಿಸಲಾಗದು.

ಎಲ್ಲ ಸಖಿಯರಿಗೆ ಹೃದಯ ಭಾಷೆಯಲಿ ವಂದನೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!