ಯುವವಾಹಿನಿ (ರಿ) ಸುರತ್ಕಲ್ ಘಟಕದಿಂದ ಶ್ರೀ ಗುರುಸ್ಮರಣೆ

ಭಜನೆಯಿಂದ ವಿಭಜನೆಯಿಲ್ಲ : ಕೃಷ್ಣಪ್ಪ ಪೂಜಾರಿ

ಸುರತ್ಕಲ್ : ಬ್ರಹ್ಮ ಶ್ರೀ ನಾರಾಯಣಗುರುಗಳ ಜನನವಾದ ನಂತರ ನಮ್ಮ ಸಮಾಜ ತಲೆಯೆತ್ತಿ ನಡೆಯುವಂತಾಗಿದೆ ಹಾಗು ಭಜನೆ ಬೇಡ ಭೋಜನ ಬೇಕೆಂಬ ಈ ಸಮಾಜದಲ್ಲಿ ಭಜನಾ ಸ್ಪರ್ಧೆ ಯನ್ನು ಏರ್ಪಡಿಸಿ ಮಕ್ಕಳಿಗೆ ಧಾರ್ಮಿಕತೆ ತಿಳಿಯಪಡಿಸಿ ಸುರತ್ಕಲ್ ಘಟಕ ಉತ್ತಮ ಕಾರ್ಯವನ್ನು ಮಾಡಿರುತ್ತದೆ. ಹಿರಿದಾದುದನ್ನು ಪೂರ್ಣ ಪ್ರಮಾಣದಲ್ಲಿ ಪ್ರೀತಿಸುವುದೇ ಭಕ್ತಿ. ಎಲ್ಲವನ್ನೂ ನಡೆಸುತ್ತಿರುವ ಶಕ್ತಿಯೇ ಬೇರೆ ಇದೆ. ತಾನು ಆ ಶಕ್ತಿಗಿಂತ ಬೇರೆ ಹಾಗೂ ಕಿರಿಯ ಎಂದು ಮಾನವ ಅಂದುಕೊಂಡಾಗ ಆ ಅದ್ಭುತ, ಅಗಮ್ಯ ಚೈತನ್ಯಕ್ಕೆ ನಮ್ಮನ್ನು ತಾವು ಅರ್ಪಿಸಿಕೊಂಡು ಪ್ರೀತಿಯಿಂದ, ಆರಾಧನೆ, ಪೂಜೆ, ಭಜನೆ ಮಾಡುವಂಥ ನೆಲೆಯೇ ಭಕ್ತಿ.ಭಜನೆಯಿಂದ ವಿಭಜನೆಯಿಲ್ಲ ಎಂದು ಬೆಳ್ತಂಗಡಿ ಗುರುದೇವಾ ಕಾಲೇಜಿನ ಪ್ರಾಂಶುಪಾಲರು ಕೃಷ್ಣಪ್ಪ ಪೂಜಾರಿತಿಳಿಸಿದರು.

ಅವರು ದಿನಾಂಕ 16-09-2018 ರಂದು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿಯಲ್ಲಿ ಯುವವಾಹಿನಿ (ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ಜರುಗಿದ ಬ್ರಹ್ಮ ಶ್ರೀ ನಾರಾಯಣಗುರು ಸ್ವಾಮೀಜಿಯವರ 164 ನೇ ಜಯಂತಿಯ ಪ್ರಯುಕ್ತ ಶ್ರೀ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕುಳಾಯಿ,ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್ ಕುಳಾಯಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ (ರಿ) ಸುರತ್ಕಲ್ ಘಟಕದ ಅಧ್ಯಕ್ಷ ಅಶೋಕ್ ಕುಳಾಯಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ರಚನಾತ್ಮಕ ಕಾರ್ಯಗಳ ಮೂಲಕ ಯುವಜನತೆಯಲ್ಲಿ ಬಾಂಧವ್ಯ ಮೂಡಿಸುವ ಕಾರ್ಯ ಶ್ಲಾಘನೀಯ : ಸಾಧು ಪೂಜಾರಿ
ಗುರುಜಯಂತಿ ಆಚರಣೆ, ಗುರು ಸಂದೇಶ ಯಾತ್ರೆಗಳು, ಗುರುಸ್ಮರಣೆಯಂತಹ ಕಾರ್ಯಕ್ರಮಗಳ ಮೂಲಕ ನಾವು ಬ್ರಹ್ಮಶ್ರೀ ನಾರಾಯಣಗುರುವರ್ಯರ ತತ್ವಗಳನ್ನು, ಸಂದೇಶಗಳನ್ನು ಮತ್ತು ಚಿಂತನೆಯನ್ನು ಸಮಾಜದಲ್ಲಿ ಪಸರಿಸಬೇಕು. ಯುವವಾಹಿನಿ ಈ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಹಾಗೂ ಮುಂದೆಯೂ ಮಾಡುತ್ತಿರಬೇಕು. ಯುವವಾಹಿನಿ ಸುರತ್ಕಲ್ ಘಟಕವೂ ಈ ಕಾರ್ಯವನ್ನು ಗುರುಸ್ಮರಣೆ ಎಂಬ ವಿಶಿಷ್ಟ ಕಾರ್ಯಕ್ರಮ ಮೂಡುತ್ತಾ ಬಂದಿದೆ. ಮುಖ್ಯವಾಗಿ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ಗುರುಗಳ ವಿಚಾರವಾಗಿ ಆಸಕ್ತಿ ಮೂಡಿಸುವ ಸಲುವಾಗಿ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆಗಳ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ. ಈ ಬಾರಿ ನಮ್ಮ ನೆಲದ ಸಂಸ್ಕೃತಿಯಾಗಿರುವ ಭಜನೆ ಸ್ಪರ್ಧೆಯ ಮೂಲಕ ವೈಶಿಷ್ಟಪೂರ್ಣವಾಗಿ ನಡೆಸಿರುವ ಸುರತ್ಕಲ್ ಘಟಕದ ಈ ಕಾರ್ಯಕ್ರಮವನ್ನು ನಾನು ಅಭಿನಂದಿಸುತ್ತೇನೆ. ಮುಂದೆಯೂ ಇಂತಹ ರಚನಾತ್ಮಕ ಕೆಲಸಗಳ ಮೂಲಕ ಸಮಾಜದಲ್ಲಿ ಉತ್ತಮ ಸಂಸ್ಕ್ರತಿ, ಪರಸ್ಪರ ಬಾಂಧವ್ಯ ಮೂಡಿಸುವ ಕೆಲಸ ಮಾಡುವಂತಾಗಲಿ, ಆ ಮೂಲಕ ಯುವವಾಹಿನಿಗೆ ಇನ್ನಷ್ಟು ಕೀರ್ತಿ ತರಲೆಂದು ಹಾರೈಸುತ್ತೇನೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಾಧು ಪೂಜಾರಿ ತಿಳಿಸಿದರು.

ಉದ್ಯಮಿ ಶ್ರೀಧರ್ ಬಿ ಕೋಟ್ಯಾನ್ , ಮಂಗಳೂರು ಮಹಾನಗರ ಪಾಲಿಕೆಯ ತೆರಿಗೆ ಹಾಗು ಹಣಕಾಸು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು, ಮಾಜಿ ಅಧ್ಯಕ್ಷ ಸಾಧು ಪೂಜಾರಿ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಕ್ತಿಗೀತೆ ಭಜನಾ ಸ್ಪರ್ಧೆಯನ್ನು ಆಯೋಜಿಸಿದ್ದು ಸುಮಾರು 9 ಶಾಲೆಯ 100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಶಾಲೆಗಳಿಗೆ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು.
ಪ್ರಥಮ ಬಹುಮಾನ: ಅಂಕುರ್ ಶಾಲೆ ಕುಳಾಯಿ,ದ್ವಿತೀಯ ಬಹುಮಾನ: ಮಹಾಲಿಂಗೇಶ್ವರ ಆಂಗ್ಲ ಮಾದ್ಯಮ ಶಾಲೆ ಇಡ್ಯಾ ಸುರತ್ಕಲ್ ಹಾಗು ತ್ರತೀಯ ಬಹುಮಾನ:ಶ್ರೀ ನಾರಾಯಣಗುರು ಶಾಲೆ ಕಾಟಿಪಳ್ಳ ಯು ಪಡೆದುಕೊಂಡಿರುತ್ತದೆ.
ಸ್ಪರ್ಧೆಯ ತೀರ್ಪುಗಾರರಾಗಿ ಜಯಂತ್ ಬೋಳೂರು, ನಮಿತ ಪ್ರೇಮ್ ಪಡುಬಿದ್ರಿ,ಲಕ್ಷ್ಮಿಧರ ಮೂಡಬಿದಿರೆ ಭಾಗವಹಿಸಿದ್ದರು.

ಬಿಲ್ಲವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಿಲ್ಲವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಘಟಕದ ಪರವಾಗಿ ನೀಡಲಾಯಿತು.ಕೃಷಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಗೋಪಾಲಕೃಷ್ಣ ಪ್ರಭು,ಕಂಬಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ದೇವೇಂದ್ರ ಕೊಟ್ಯಾನ್ ಪಲೆಮಾರ್ ಹಾಗು ಮೂರ್ತೆದಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಶೇಖರ ಪೂಜರಿ ಸಸಿಹಿತ್ಲು ರವರಿಗೆ ಘಟಕದಿಂದ ಸನ್ಮಾನಿಸಲಾಯಿತು. ಘಟಕದ ಮಾಜಿ ಅಧ್ಯಕ್ಷರಾದ ವಿಜಯ್ ಎಸ್‌ ಕುಕ್ಯಾನ್ ರವರ ಪುತ್ರ ಲೋಕೆಶ್ ವಿ ಕುಕ್ಯಾನ್ ರವರಿಗೆ ಕೆ ಎ ಎಸ್ ಪರೀಕ್ಷೆ ಉತ್ತೀರ್ಣರಾದ ಪರವಾಗಿ ಸನ್ಮಾನಿಸಲಾಯಿತು
ಯುವವಾಹಿನಿ ರಿ ಸುರತ್ಕಲ್ ಘಟಕದ ಅಧ್ಯಕ್ಷರಾದ ಅಶೋಕ್ ರವರು ಪ್ರಸ್ತಾವನೆ ಮೂಲಕ ಸ್ವಾಗತಿಸಿದರು. ಕುಟುಂಬ ಸಂಪರ್ಕ ನಿರ್ದೇಶಕಾರಾದ ತಾರ ಅಶೋಕ್ ವಂದಿಸಿದರು. ಮಾಜಿ ಅಧ್ಯಕ್ಷರಾದ ಬಾಸ್ಕರ್ ಸಾಲ್ಯಾನ್ ರವರು ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ರಂಜಿತ್ ಕುಮಾರ್ ಹಾಗು ಕಾರ್ಯಕ್ರಮದ ಸಂಚಾಲಕರಾದ ರವೀಂದ್ರ ಸಸಿಹಿತ್ಲುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!