ಯುವ ಸಿಂಚನ : ಫೆಬ್ರವರಿ 2018

ಗುಪ್ತಗಾಮಿನಿ ಯುವವಾಹಿನಿ…….. ರಮ್ಯ ಸುಜೀರ್

ಬದುಕು ಆಧುನೀಕತೆಯತ್ತ ಹೊರಳುತ್ತಿದೆ. ಗತವೈಭವದ ಸಂದಿ ಪಾಡ್ದನಗಳು ನೇಪಥ್ಯಕ್ಕೆ ಸರಿಯುತ್ತಿದೆ. ತುಳುವ ಆಚಾರ-ವಿಚಾರ, ಹಿರಿಮೆ-ಗರಿಮೆಗಳು ಸದ್ದಡಗಿಸಿ ಮೂಕವಾಗಿದೆಯೆನೋ ಎನ್ನುವಂತಹ ದಿನಗಳಲ್ಲಿಯೇ, ಸಂದಿ ಹೋದ ಕಾಲವನ್ನು ಮರುಕಳಿಸುವಂತೆ ಮಾಡಿ, ಸತ್ಯದ ಹೊಳಪ ಲೇಪನವನ್ನು ನೀಡುತ್ತಾ, ನಿತ್ಯ-ನಿರಂತರ ಗುಪ್ತಗಾಮಿನಿಯಾಗಿ ಹರಿಯುತ್ತಾ, ತನ್ನೊಂದಿಗೆ ತುಳುವ ಮಣ್ಣಿನ ಸತ್ವ-ಸಾರ, ಬಿರುವ ಸಮುದಾಯದ ಯುವಜನತೆಯ ಪ್ರತಿಭಾ ಕೌಶಲ್ಯವನ್ನು ಒಗ್ಗೂಡಿಸಿಕೊಂಡು, ಎಲ್ಲೋ ಮರೆಯಾಗಿ ಹೋಗುತ್ತಿರುವ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲಿ, ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟು, ಸಾಧನಾಲೋಕಕ್ಕೆ ಪರಿಚಯಿಸಿಕೊಂಡು ಸಾಧನೆಯ ಮೇರುಶಿಖರದ ಅನಂತತೆಯ ಪಥದತ್ತ ಸಾಗಿಬರುತ್ತಿರುವ ಹೆಮ್ಮೆಯ ಸಂಘಟನೆ “ಯುವವಾಹಿನಿ”.
ಸಾಂಸ್ಕ್ರತಿಕ – ಸಂಸ್ಕ್ರತಿ , ಆಚರಣೆ-ಆಚಾರಗಳನ್ನು ತನ್ನೊಳಗೆ ವಿಲೀನಗೊಳಿಸುತ್ತಾ ಸದ್ದಿಲ್ಲದೆ ಸತತ 30 ವರ್ಷಗಳಿಂದ ಸಮಾಜಹಿತ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ, ಶಿಸ್ತು, ಅಚ್ಚುಕಟ್ಟುತನ, ಸಮಯ ಪಾಲನೆಗೆ ಇನ್ನೊಂದು ಹೆಸರೇ ಯುವವಾಹಿನಿಯ ಯುವ ಸಂಘಟನೆ ಎನ್ನುವಷ್ಟರ ಮಟ್ಟಿಗೆ, ಯುವಜನತೆಯನ್ನು ಒಗ್ಗೂಡಿಸಿ ಅವರಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಲು, ಕಾರ್ಯದಕ್ಷತೆಯಿಂದ, ನೈಪುಣ್ಯತೆಯಿಂದ ಮುನ್ನುಗ್ಗುತ್ತಾ ತನ್ನದೇ ಆದಂತಹ ಇತಿಹಾಸವೊಂದನ್ನು ನಿರ್ಮಿಸ ಹೊರಟಿರುವುದು ನಿಜಕ್ಕೂ ಶ್ಲಾಘನೀಯ.
ತುಳುವ ಮಣ್ಣಿನ ಸತ್ವ-ಸಾರವನ್ನು ನಾಲ್ದೆಸೆಯಲ್ಲೂ ಪಸರಿಸುತ್ತಾ, ಯುವಸಂಘಟನೆಯ ಕಾರ್ಯಗಳಿಂದ ಜನಮನ್ನಣೆ ಪಡೆಯುತ್ತಾ ಬಂದಿರುವ ಯುವವಾಹಿನಿಯು ಬಿ.ಸಿ.ರೋಡಿನ ಸ್ಪರ್ಶಕಲಾ ಮಂದಿರದಲ್ಲಿ ವಿನೂತನ ಶೈಲಿಯ “ಡೆನ್ನಾನ.. ಡೆನ್ನನ -2018” ಎಂಬ ಶೀರ್ಷಿಕೆಯಡಿಯಲ್ಲಿ ವಿಶಿಷ್ಟವಾದ ಅಂತರ್‍ಘಟಕ ಸಾಂಸ್ಕøತಿಕ ಸ್ಪರ್ಧೆಯನ್ನು ಏರ್ಪಡಿಸಿ ಎಲ್ಲಾ ಘಟಕಗಳ ಸದಸ್ಯರೊಳಗೆ ಹುದುಗಿರುವ ಕಲಾ ಕೌಶಲ್ಯವನ್ನು ಪ್ರಸ್ತುತಪಡಿಸಲು ವೇದಿಕೆಯನ್ನು ಒದಗಿಸಿಕೊಟ್ಟಿತು.
ವಿಶಿಷ್ಟವಾದ ಶೈಲಿಯಲ್ಲಿ ಸ್ವಾಗತಿಸುತ್ತಿದ್ದ ದ್ವಾರಗಳು, 28 ಘಟಕಗಳ ಹೆಸರನ್ನು ಹೊಂದಿದ್ದ ‘ಸತ್ತಿಗೆ’ ಎಂಬ ಪರಿಕಲ್ಪನೆಯಡಿಯಲ್ಲಿ ಮೂಡಿಬಂದಿದ್ದ ಆಕರ್ಷಕ ಕೊಡೆಗಳು, ಸಾಂಪ್ರಾದಾಯಿಕ ಶೈಲಿಯಲ್ಲಿ ಅತಿಥಿಗಳನ್ನು ಬರಮಾಡಿಕೊಂಡ ರೀತಿ, ಯುವವಾಹಿನಿಯ ಧ್ವಜದ ಆರೋಹಣದ ಮೂಲಕ ಕಾರ್ಯಕ್ರಮವು ಇನ್ನಷ್ಟು ಮೆರುಗನ್ನು ಪಡೆದವು. ಕಣ್ಣು ಹಾಯಿಸಿದಲ್ಲಿ ತುಳುವ ದೈವ, ಭೂತಾರಾಧನೆಯ ಅನಾವರಣ, ಸಂಸ್ಕ್ರತಿ   ಜಾನಪದೀಯ ಸೊಗಡಿನ ತನನ ಕಲಾರಸಿಕರ ಮನವನ್ನು ಸ್ಪರ್ಶಿಸುವಲ್ಲಿ ಯಶಸ್ವಿಯಾದವು.
28 ಘಟಕಗಳ ನಡುವಿನ ಸಾಂಸ್ಕøತಿಕ ಸ್ಪರ್ಧೆಯಲ್ಲಿ, ತುಳುವ ನಾಡಿನ ಸ್ವರ್ಣ ಕೇದಗೆ ದೇಯಿ ಬೈದೆತಿಯಾದ ಕಥಾಹಂದರವನ್ನು ಕಲಾರಸಿಕರಿಗೆ ಉಣಬಡಿಸಿದ ಮೂಡುಬಿದಿರೆಯ ಯುವವಾಹಿನಿಯ ಘಟಕವು ಪ್ರಥಮ ಬಹುಮಾನವನ್ನು ತನ್ನ ಮುಡಿಗೇರಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಯಿತು.


ಈ ಎಲ್ಲಾ ಕಾರ್ಯಕ್ರಮಗಳಿಗೆ ಇನ್ನಷ್ಟು ಪುಷ್ಠಿ ನೀಡಿದ್ದು ಎಂದರೆ ರಾಜೇಶ್ ಸುವರ್ಣ ಮತ್ತು ದಿನೇಶ್ ಸುವರ್ಣ ಇವರ ಪರಿಕಲ್ಪನೆಯಲ್ಲಿ, ಎಚ್.ಕೆ. ನೈನಾಡ್‍ರವರ ಸಾಹಿತ್ಯದಲ್ಲಿ, ಭಾಸ್ಕರ್‍ರಾವ್ ಬಿ.ಸಿ.ರೋಡ್ ಕಂಠಸಿರಿಯಲ್ಲಿ ಮೂಡಿಬಂದಂತಹ ‘ಯುವವಾಹಿನಿಯೇ…ಬಿರುವೆರೆ ಯುವ ಸಂಘಟನೆ” ಎಂಬ ಹಾಡು. ಕೇಳಿದಷ್ಟು ಕಿವಿಯಲ್ಲಿ ರಿಂಗಣಿಸುವ ಸದ್ದಿಲ್ಲದೆ ಮನದಲ್ಲಿ ಧ್ವನಿಸುವ ಹಾಡಾಗಿ ಕಲಾರಸಿಕರ ಮನತಣಿಸಿ, ‘ಡೆನ್ನಾನಾ-ಡೆನ್ನಾನಾ’ದ ಕಂಪನ್ನು ಜಾಗರೂಕತೆಯಿಂದ ನೆನಪಬುತ್ತಿಯಲ್ಲಿರಿಸುವಲ್ಲಿ ಸಫಲವಾಯಿತು.
ಕಳೆದ 10 ವರ್ಷಗಳಿಂದ ಯುವವಾಹಿನಿಯು ಕೊಡುತ್ತಾ ಬಂದಿರುವ ‘ವಿಶುಕುಮಾರ್ ಪ್ರಶಸ್ತಿ’ ಮತ್ತು ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತ್ಯ ಪ್ರಶಸ್ತಿಯು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಾಹಿತಿಗಳಿಗೆ ದಾರಿದೀಪವಾಗುತ್ತಿದೆ. ನಾನು 2016ರ ಸಾಲಿನ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತ್ಯ ಪ್ರಶಸ್ತಿಯನ್ನು ಪಡೆದುಕೊಂಡವಳಾಗಿದ್ದು, ಯುವವಾಹಿನಿಯು ನನ್ನ ಸಾಹಿತ್ಯ- ಸಾಂಸ್ಕ್ರತಿಕ  ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನೆಂದೂ ಚಿರಋಣಿ. ನನ್ನಂತೆಯೇ ಎಲ್ಲೋ ಸರಿದುಹೋಗಿರುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ನಿಜಕ್ಕೂ ಯುವವಾಹಿನಿಯು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ. ಇನ್ನಷ್ಟು ಪ್ರತಿಭೆಗಳು ಕಲಾ ಲೋಕದ ಬೆಳಕ ಕಾಣುವಂತಾಗಬೇಕು. ಯುವಸಿಂಚನದ ಮೂಲಕ ಲೇಖನವನ್ನು ಪ್ರಕಟಿಸಲು ಅನುವು ಮಾಡಿಕೊಟ್ಟ ನಿರಂತರವಾಗಿ ನನ್ನ ಸಾಹಿತ್ಯಾಭಿರುಚಿಗೆ ಪ್ರೋತ್ಸಾಹವನ್ನು ನೀಡುತ್ತಿರುವ ರಾಜೇಶ್ ಸುವರ್ಣ, ಬಿ. ತಮ್ಮಯ ಇವರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ಒಟ್ಟಾರೆಯಾಗಿ ಯುವವಾಹಿನಿಯ ಅರಿವು ನಿತ್ಯನಿರಂತರ ವಾಗಿರಲಿ. ಆ ಮೂಲಕ ಯುವಸಂಘಟನೆಗಳ ಸಾಲಿನಲ್ಲಿ ಯುವವಾಹಿನಿಯು ತನ್ನದೇ ಆದಂತಹ ವಿಭಿನ್ನತೆಗೆ ಮಾದರಿಯಾಗಲಿ.. ಸಮಾಜಮುಖಿ ಕಾರ್ಯಗಳಿಂದ ತನ್ನದೇ ಆದಂತಹ ಇತಿಹಾಸವನ್ನು ಸೃಷ್ಟಿಸಲಿ ಎಂಬುದೇ ನನ್ನ ಆಶಯ.

 

ರಮ್ಯ ಸುಜೀರ್ ಉಪನ್ಯಾಸಕಿ ಆಳ್ವಾಸ್ ಪದವಿಪೂರ್ವ ಕಾಲೇಜು ಮೂಡಬಿದಿರೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!