ಯುವವಾಹಿನಿ (ರಿ) ಕೂಳೂರು ಘಟಕ

ಅಶಕ್ತ ಕೈಗಳಿಗೆ ನೆರವಿನ ನಂದಾದೀಪ

ದಿನಾಂಕ 24.10.19 ರಂದು ಸಂಜೆ 5.30 ಕ್ಕೆ ಸರಿಯಾಗಿ ಯುವವಾಹಿನಿ ಕೂಳೂರು ಘಟಕದ ವತಿಯಿಂದ ದೀಪಾವಳಿ ಪ್ರಯುಕ್ತ 5 ಕಡು ಬಡವ ಕುಟುಂಬಕ್ಕೆ ದೀಪಾವಳಿ ಆಚರಿಸಲು ಹಾಗೂ ಒಂದು ತಿಂಗಳಿಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಮೊದಲಿಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ 20 ಜನ ಸದಸ್ಯರೊಂದಿಗೆ ಪದ್ಮನಾಭ ಕುಲಾಲ್, ದಿ. ಗೋಪಾಲ ಪೂಜಾರಿ, ಅಪ್ಪು ಆಚಾರಿ, ಗುರುವಪ್ಪ ಪೂಜಾರಿ ಒಟ್ಟು 5 ಮನೆಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ. ಯು ಅಮೀನ್, ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್, ಕೋಶಾಧಿಕಾರಿ ಇಂದಿರ, ಸಂಘಟನಾ ಕಾರ್ಯದರ್ಶಿ ನಿಶಿತ್ ಹಾಗೂ ಶಾರದಾ ಸೇವ ಟ್ರಸ್ಟ್ ವಿದ್ಯಾನಗರ ಇದರ ಅಧ್ಯಕ್ಷರಾದ ಉಮೇಶ್, ಹಿರಿಯರಾದ ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!