ಯುವ ಸಿಂಚನ : ಪದ್ಮನಾಭ ಮರೋಳಿ

ಅಧ್ಯಕ್ಷರ ಮಾತು

ಆತ್ಮೀಯರೇ,

ಸ್ವರ್ಗದ ಸುಖವನ್ನಾಗಲೀ ನರಕದ ಯಾತನೆಯನ್ನಾಗಲೀ ಅನುಭವಿಸಿ ಬಂದು ಹೇಳಿದವರಿಲ್ಲ, ಕೆಲವು ವಿಚಾರವಾದಿಗಳು ಸ್ವರ್ಗ ಮತ್ತು ನರಕಗಳು ನಾವು ಬದುಕಿರುವಾಗಲೇ ಸಿಗುತ್ತದೆ ಎನ್ನುತ್ತಾರೆ. ಆದರೂ ಪ್ರಪಂಚದ ಎಲ್ಲಾ ಧರ್ಮೀಯರು ಅವರವರ ಭಾಷೆ ಸಂಸ್ಕೃತಿಗಳಿಗೆ ಅನುಗುಣವಾಗಿ ನಂಬಿಕೊಂಡು ಬಂದಿದ್ದಾರೆ. ಏನೇ ಆಗಲಿ ಇದೆಲ್ಲವನ್ನು ಮೌನವಾಗಿ ಅನುಕರಿಸುವ ನಾವುಗಳು ಜಗತ್ತಿನಲ್ಲಿಯೇ ಶ್ರೇಷ್ಠ ಸಂದೇಶಗಳನ್ನು ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಆದಷ್ಟು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಬೇಕಾಗಿದೆ. ಗುರುಗಳು ಅದೆಷ್ಟು ಉತ್ತಮವಾದ ಭೋದನೆ ಹಾಗೂ ತತ್ವಾದರ್ಶಗಳನ್ನು ನೀಡಿದ್ದಾರೆ. ಎಲ್ಲವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರೆ ನಾವು ಕೂಡಾ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಿಂಚುವಂತಹ ವ್ಯಕ್ತಿಗಳಾಗುತ್ತಿದ್ದೆವು. ನಾವು ಎಡವಿದ್ದು ಇಲ್ಲೇ. ಅವರ ತತ್ವಗಳನ್ನು ಅಳವಡಿಸುವ ಬದಲಾಗಿ ಅವರಿಗೆ ಮಂದಿರ ಕಟ್ಟಿ ಪೂಜೆ ಮಾಡಿದೆವು ಹಾಗೂ ಈ ವೈಭವದಲ್ಲೇ ಮೈಮರೆತೆವು. ಗುರುಗಳು ನಿಜವಾಗಿಯೂ ಪೂಜನೀಯರು ಅವರನ್ನು ಪೂಜೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅವರ ಏನು ಭೋದನೆ, ತತ್ವಾದರ್ಶಗಳಿವೆ ಅವುಗಳನ್ನು ನಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡು ಪೂಜಿಸಿದರೆ ಅದು ನಿಜವಾದ ಭಕ್ತಿಯ ಪೂಜೆಯಾಗುತ್ತದೆ. ಇನ್ನೂ ಕಾಲ ಮಿಂಚಿಲ್ಲ. ನಾವು ಸಮಾಜ ಸೇವೆ ಮಾಡುತ್ತಿದ್ದೇವೆ ಎನ್ನುವ ಭ್ರಮೆ ಸರಿಯಲ್ಲ. ನಾವು ನಮ್ಮ ಋಣದ ಭಾರವನ್ನು ಕಡಿಮೆ ಮಾಡುವಂತಹ ಪ್ರಯತ್ನ ಮಾಡುತ್ತಿದ್ದೇವೆ ಎಂದು ಎಣಿಸಬೇಕು. ಇಂತಹ ಉತ್ತಮ ಸಂದೇಶಗಳನ್ನು ಅನುಷ್ಠಾನ ಮಾಡುತ್ತಾ ವಿದ್ಯೆಗೆ, ಸಂಘಟನೆಗೆ ಮತ್ತು ಸಮಾಜ ಸೇವೆಗೆ ಮಹತ್ವ ಕೊಡೋಣ ಹಾಗೂ ನಮ್ಮ ಸಮಾಜ ಕೂಡಾ ಒಂದು ಮುಂದುವರಿದ ಸಮಾಜವಾಗಿ ನಿರ್ಮಾಣವಾಗುವಂತೆ ಪ್ರಯತ್ನಿಸೋಣ. ನಮ್ಮ ಮಕ್ಕಳಿಗೂ ಒಂದು ಒಳ್ಳೆಯ, ಉನ್ನತ ಶಿಕ್ಷಣವನ್ನು ನೀಡುವುದರೊಂದಿಗೆ ಅವರು ಸ್ಪರ್ಧಾತ್ಮಕ ಯುಗದ ಸ್ಪರ್ಧೆಯಲ್ಲಿ ಉತ್ತೀರ್ಣರಾಗುವಂತೆ ಸಹಕರಿಸೋಣ.

ಕೋ ಹಿ ಭಾರಃ ಸಮರ್ಥಾನಾಂ ಕಿ ದೂರಂ
ವ್ಯವಸಾಯಿನಾಮ್| ಕೋ ವಿದೇಶಃ
ಸುವಿದ್ಯಾನಾಂ ಕಃ ಪರಃ ಪ್ರಿಯವಾದಿನಾಮ್||

ಶಕ್ತಿವಂತರಿಗೆ ಯಾವುದು ಭಾರ? ದುಡಿಯುವವನಿಗೆ ಯಾವುದು ದೂರ? ವಿದ್ಯಾವಂತನಿಗೆ ಯಾವ ದೇಶವಾದರೇನು? ಸವಿ ಮಾತನಾಡುವ ವನಿಗೆ ಪರಕೀಯನಾರು? (ಇಂತವರಿಗೆ ಸಾಧಿಸದಂತಹದೇನು?)

ಐಎಎಸ್, ಐಪಿಎಸ್ ಪ್ರೇರಣಾ ಶಿಬಿರ, ಸ್ನೇಹ ಸಂತೋಷ ಸಮ್ಮಿಲನ ಹಾಗೂ ಕೊಲ್ಯದಲ್ಲಿ ಹೊಸ ಘಟಕವೊಂದನ್ನು ಸ್ಥಾಪಿಸುವ ನೆಲೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮಂಗಳೂರು ಘಟಕಕ್ಕೆ ಆತ್ಮೀಯ ವಂದನೆಗಳು, ಗೃಹ ರಕ್ಷಕದಳ ಮತ್ತು ಅಗ್ನಿಶಾಮಕ ದಳದವರಿಂದ ಪ್ರಾತ್ಯಾಕ್ಷಿಕೆಯನ್ನು ಮಾಡಿಸಿದ, ವಧುವರರ ಹೊಂದಾಣಿಕೆ ಕೆಲಸ ಮಾಡುತ್ತಿರುವ ಮತ್ತು ಶಿವಗಿರಿ ಯಾತ್ರೆಯನ್ನು ಕೈಗೊಂಡ ಮಂಗಳೂರು ಮಹಿಳಾ ಘಟಕಕ್ಕೆ ಪ್ರೀತಿಯ ನಮನಗಳು.

ಉಜ್ಜೋಡಿ ಮಹಾಕಾಳಿ ದೈವಸ್ಥಾನಕ್ಕೆ ೫೦ ಕುರ್ಚಿ ವಿತರಣೆ ಹಾಗೂ ಭಜನಾ ಕಾರ್ಯಕ್ರಮ ಮಾಡಿದಲ್ಲದೆ ಮಹಿಳಾ ಘಟಕದ ಗೃಹರಕ್ಷಕ ಮತ್ತು ಅಗ್ನಿಶಾಮಕ ದಳದ ಪ್ರಾತ್ಯಾಕ್ಷಿಕೆಗೆ ಪೂರ್ಣ ಸಹಕಾರ ನೀಡಿದ ಕಂಕನಾಡಿ ಘಟಕಕ್ಕೆ ಅಭಿನಂದನೆಗಳು. ಉಚಿತ ನಾಟಕ ಪ್ರದರ್ಶನ ಮತ್ತು ಸ್ನೇಹ ಮಿಲನ ಕಾರ್ಯಕ್ರಮಗಳನ್ನು ಮಾಡಿದ ಕೂಳೂರು ಘಟಕಕ್ಕೆ ನಲ್ಮೆಯ ನಮನಗಳು. ಶಿವಗಿರಿಗೆ ಪ್ರವಾಸ ಹಾಗೂ ವೈದ್ಯಕೀಯ ಮಾಹಿತಿ ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪಣಂಬೂರು ಘಟಕಕ್ಕೆ ಶುಭಾಶಯಗಳು. ವ್ಯಕ್ತಿತ್ವ ವಿಕಸನ ಶಿಬಿರವನ್ನು ಮಾಡಿದ ಹಾಗೂ ಪ್ರತಿ ಆದಿತ್ಯವಾರ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛಗೊಳಿಸುತ್ತಿರುವ ಬಜಪೆ ಘಟಕಕ್ಕೆ ವಂದನೆಗಳು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ತರಬೇತಿ ಹಾಗೂ ಉಚಿತ ವೈದ್ಯಕೀಯ ಶಿಬಿರ ಮಾಡಿದ ಮೂಲ್ಕಿ ಘಟಕಕ್ಕೆ ಅಭಿನಂದನೆಗಳು. ಪರಿಸರದ ಬಿಲ್ಲವ ಕುಟುಂಬಗಳ ಸರ್ವಕಾರ್ಯವನ್ನು ಮಾಡಿದ ಅಡ್ವೆ ಘಟಕಕ್ಕೆ ಪ್ರೀತಿಯ ನಮನಗಳು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ತರಬೇತಿ, ಸೈಂಟ್ ಮೆರೀಸ್ ಐಲೆಂಡ್‌ಗೆ ಪಿಕ್‌ನಿಕ್ ಹಾಗೂ ಬಡಕುಟುಂಬಕ್ಕೆ ಮನೆ ನಿರ್ಮಾಣ ಮಾಡಿ ಕೊಡಲು ಕೆಲಸ ಪ್ರಾರಂಭಿಸಿದ ಹೆಜಮಾಡಿ ಘಟಕಕ್ಕೆ ಆತ್ಮೀಯ ವಂದನೆಗಳು. ಜ್ಯಮ್ ಜ್ಯೂಶ್ ಮತ್ತು ಸ್ವಾಸ್ ತಯಾರಿ ಬಗ್ಗೆ ತರಬೇತಿ ಕಾರ್ಯಾಗಾರ ನಡೆಸಿದ ಹಳೆಯಂಗಡಿ ಘಟಕಕ್ಕೆ ನಮನಗಳು. ಶಿವಗಿರಿಗೆ ಪ್ರವಾಸ ಕಾರ್ಯಕ್ರಮ ಮಾಡಿದ ಪಡುಬಿದ್ರಿ ಘಟಕಕ್ಕೆ ವಂದನೆಗಳು. ನರಿಮೊಗರು ಗ್ರಾಮ ಸಮಿತಿ ಉದ್ಘಾಟನೆ ಹಾಗೂ ಬೃಹತ್ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಿದ ಹಾಗೂ ಗೆಜ್ಜೆಗಿರಿ ನದಂನ ಬಿತ್ತಲ್‌ನಲ್ಲಿ ನಡೆಯುತ್ತಿರುವ ಕೋಟಿ ಚೆನ್ನಯ ಪುನರುತ್ಥಾನ ಕಾರ್ಯದಲ್ಲಿ ನಿರಂತರವಾಗಿ ಸೇವೆಗೈಯ್ಯುತ್ತಿರುವ ಪುತ್ತೂರು ಘಟಕಕ್ಕೆ ಆತ್ಮೀಯ ಅಭಿನಂದನೆಗಳು. ಶಾಂತಿಗಳನ್ನು ಸನ್ಮಾನಿಸಿ ವಿವಿಧ ಸ್ಪರ್ಧೆಗಳನ್ನು ನಡೆಸುವುದರ ಮೂಲಕ ಪದಗ್ರಹಣ ಕಾರ್ಯಕ್ರಮವನ್ನು ಮಾಡಿದ ಸುರತ್ಕಲ್ ಘಟಕಕ್ಕೆ ಅಕ್ಕರೆಯ ನಮನಗಳು. ’ತಲೆಗೊಂದು ಸೂರು’ ಕಾರ್ಯಕ್ರಮದ ಶಿಲಾನ್ಯಾಸ ಗೈದ ಹಾಗೂ ಮಹಿಳೆಯರಿಗೆ ಸೌಂದರ್ಯ ತರಬೇತಿಯನ್ನು ನೀಡಿದ ಉಡುಪಿ ಘಟಕಕ್ಕೆ ಅಭಿನಂದನೆಗಳು.

ಬಡಕುಟುಂಬಕ್ಕೆ ಸೂರು ನಿರ್ಮಾಣ ಕಾರ್ಯದಲ್ಲಿ ತೊಡಗಿ, ಸಾಮೂಹಿಕ ಕರಸೇವೆಯನ್ನು ಮಾಡಿದ ಬಂಟ್ವಾಳ ಘಟಕದ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

ನಮಸ್ಕಾರ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!