ಅಧ್ಯಕ್ಷರು

ಅಶೋಕ್ ಕುಮಾರ್ – ಅಧ್ಯಕ್ಷರು -1995-96

ಮಂಗಳೂರು ಅಶೋಕನಗರದ ನಿವಾಸಿಯಾಗಿರುವ ಅಶೋಕ್ ಕುಮಾರ್ ಎಂ.ಎ ಪದವಿಧರರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇಲ್ಲಿ ಡೆಪ್ಯುಟಿ ಜನರಲ್ ಮೇನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ್ ಕುಮಾರ್ ‌ರವರು ಸಮಾಜ ಸೇವಕರು. ಯುವವಾಹಿನಿಯ ಸ್ಥಾಪಕ ಸದಸ್ಯರಲ್ಲೋರ್ವರು. ದಿಟ್ಟ, ನೇರ ನಡೆನುಡಿಯ ಇವರು ಸದಾ ಚಟುವಟಿಕೆಯ ದಣಿವರಿಯದ ವ್ಯಕ್ತಿ. ಹಿಡಿದ ಕೆಲಸವನ್ನು ಮಾಡಿ ಮುಗಿಸುವ ಛಾತಿಯುಳ್ಳವರು. ಯುವವಾಹಿನಿಯ ಸದಸ್ಯರಾಗಿದ್ದುಕೊಂಡು, ಕುದ್ರೋಳಿ ಯುವಕ ಸಂಘ, ಕುದ್ರೋಳಿ, ಮಂಗಳೂರು ಇದರ ಅಧ್ಯಕ್ಷರಾಗಿ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ […]

Read More

ಕೆ. ವಿಶ್ವನಾಥ್ – ಅಧ್ಯಕ್ಷರು -1994-95

ಬಿ.ಎ. ಪದವೀಧರ, ನವ ಮಂಗಳೂರು ಬಂದರು ಮಂಡಳಿಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಹಾಯಕ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದವರು. ಲಯನ್ಸ್, ಜೇಸೀ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ. ನವ ಮಂಗಳೂರು ಬಂದರು ಸಾರ್ವಜನಿಕ ಗಣೇಶೋತ್ಸವ ಮತ್ತು ನಾಗಬನ ಜೀರ್ಣೋದ್ಧಾರ ಸಮಿತಿಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಗಳಿಸಿರುವರು. 1994-95 ರ ಸಾಲಿನ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. 1994 ರ ಆಗಸ್ಟ್ ತಿಂಗಳಲ್ಲಿ ಮಂಗಳೂರು ಶ್ರೀ ಕ್ಷೇತ್ರ ಕುದ್ರೋಳಿಯಿಂದ ಉಡುಪಿ ಬನ್ನಂಜೆಯವರೆಗೆ […]

Read More

ಮಾಧವ ಕೋಟ್ಯಾನ್ ಕುಳೂರ್ – ಅಧ್ಯಕ್ಷರು -1993-94

1993-94 ರ ಸಾಲಿನಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರು. ಇವರ ಪತ್ನಿ ಲೀಲಾ ಎಂ. ಕೋಟ್ಯಾನ್, ಮಕ್ಕಳು ಶ್ರೀಮತಿ ಸವಿತ, ಶ್ರೀಮತಿ ಕವಿತ ಹಾಗೂ ಸುಬ್ರಹ್ಮಣ್ಯ ಮೂರು ಮಕ್ಕಳು. ಇವರ ಅವಧಿಯಲ್ಲಿ ನಡೆದಂತಹ ಕಾರ್ಯಕ್ರಮಗಳು ವಧುವರರ ಸಮಾವೇಶ ನಡೆಸಲು ತಯಾರಿ ನಡೆಸಿ 3 ಜೋಡಿ ವಧುವರರನ್ನು ಹೊಂದಿಸಿಕೊಟ್ಟಿದ್ದಾರೆ. ಶ್ರೀಯುತ ಶಂಕರ ಪೂಜಾರಿ ಫಲಿಮಾರು ಇವರೊಬ್ಬ ಅಂಗವಿಕಲ ವ್ಯಕ್ತಿಯಾಗಿದ್ದು, ತನ್ನ ಜೀವನದ ನಿರ್ವಹಣೆಗೋಸ್ಕರ ಒಂದು ಸಾರ್ವಜನಿಕ ದೂರವಾಣಿ ಕೇಂದ್ರವನ್ನು ಆರಂಭಿಸಲು ಆರ್ಥಿಕ ಸಹಾಯ ನೀಡಲಾಗಿತ್ತು. ಸರಕಾರದಿಂದ ಹಿಂದುಳಿದ ವರ್ಗಗಳಿಗೆ ಸಿಗುವ […]

Read More

ಲೋಕನಾಥ್ ಆರ್. ಸನಿಲ್ – ಅಧ್ಯಕ್ಷರು -1992-93

1992-93 ರ ಸಾಲಿನ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕನಾಥ ಆರ್. ಸನಿಲ್‌ರವರ ಅಧಿಕಾರವಧಿಯಲ್ಲಿ BSRB ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ತರಬೇತಿ ಶಿಬಿರ ಉಚಿತವಾಗಿ ನಡೆಸಲಾಗಿದೆ. ಸಮಾಜದ ಬಂಧುಗಳಿಗೆ ಕನ್ನಡ ಹಾಗೂ ತುಳುವಿನಲ್ಲಿ ಪ್ರಬಂಧ ಮತ್ತು ಆಶುಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಕಳದಲ್ಲಿ ಯುವವಾಹಿನಿಯ ನೂತನ ಘಟಕವನ್ನು ಪ್ರಾರಂಭಿಸಲಾಯಿತು. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಸಲುವಾಗಿ ವಿದ್ಯಾನಿಧಿಯನ್ನು ಸ್ಥಾಪಿಸಲಾಯಿತು. ಹಳೆಯಂಗಡಿಯಲ್ಲಿ ಸನಿಲ್ಸ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ (ಬಳಿಕ ಸನಿಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್) ಎಂಬ ಟೈಪ್‌ರೈಟಿಂಗ್ ಇನ್ಸಿಟ್ಯೂಟನ್ನು […]

Read More

ಗಂಗಾಧರ ಪೂಜಾರಿ – ಅಧ್ಯಕ್ಷರು -1991-92

ಯುವವಾಹಿನಿಯ ಆರಂಭಿಕ ವರ್ಷಗಳಲ್ಲಿ ಸಕ್ರಿಯ ಸಂಘಟಕರಲ್ಲಿ ಓರ್ವರಾದ ಶ್ರೀ ಗಂಗಾಧರ ಪೂಜಾರಿಯವರು ಯುವವಾಹಿನಿ ಮಂಗಳೂರು ಘಟಕದ ಸದಸ್ಯರಾಗಿದ್ದು 1989 ರಲ್ಲಿ ಘಟಕದ ದ್ವಿತೀಯ ಅಧ್ಯಕ್ಷರಾಗಿದ್ದು 1991-1992 ರಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇವರ ಅವಧಿಯಲ್ಲಿ ಯುವವಾಹಿನಿ ಪಣಂಬೂರು ಘಟಕವು ಪ್ರಾರಂಭವಾಯಿತು. ಬಿ.ಕಾಂ. ಪದವೀದರರಾಗಿರುವ ಶ್ರೀ ಗಂಗಾಧರ ಪೂಜಾರಿಯವರು ಮಂಗಳೂರಿನ ಸರಕಾರಿ ಕಾಲೇಜಿನ ವಾಲಿಬಾಲ್ ತಂಡದ ಸದಸ್ಯರು. N.C.C. ಯ AIRWING ವಿಭಾಗದ ’B’ ಸರ್ಟಿಫಿಕೇಟ್ ಪಡೆದವರು. 1974-75 ರಲ್ಲಿ NCC, AIRWING ಯ ರಾಷ್ಟ್ರಮಟ್ಟದ ಶಿಬಿರ ಕಾಶ್ಮೀರದಲ್ಲಿ ನಡೆದಾಗ ಅವಿಭಜಿತ […]

Read More

ಪಿ. ಎ. ಪೂಜಾರಿ – ಅಧ್ಯಕ್ಷರು -1990-91

ನಡುಪೊರೊಟ್ಟು ಮನೆ ಪಿಲಿ ಮೊಗರು ಗ್ರಾಮದ ವಾಮದ ಪದವಿನ ದಿ| ಶ್ರೀನಾರ್ಣ ಪೂಜಾರಿ ಮತ್ತು ಶ್ರೀಮತಿ ಅಪ್ಪಿ ಪೂಜಾರಿ ಇವರ ಸುಪುತ್ರನಾಗಿ 1954 ರಲ್ಲಿ ಜನಿಸಿದ ಇವರು ವಾಮದ ಪದವಿನ ಚೆನೈತ್ತೋಡಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ವೇಣೂರಿನಲ್ಲಿ ಪ್ರೌಢ ಶಿಕ್ಷಣವನ್ನೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಕಾಂ ಪದವಿ ಹಾಗೂ1995 ರಲ್ಲಿ ಕೋ ಆಪರೇಟಿವ್ ಡಿಪ್ಲೋಮಾ ಪದವಿ ಪಡೆದಿದ್ದಾರೆ. 1973 ರಲ್ಲಿ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಇದರ ಮುಖಾಂತರ ಪ್ರಾಥಮಿಕ ಸಹಕಾರಿ ಸಂಘಗಳ ಕಾರ್ಯದರ್ಶಿಯಾಗಿ […]

Read More

ಎಂ. ಎಸ್. ಕೋಟ್ಯಾನ್ – ಅಧ್ಯಕ್ಷರು -1989-90

ಎಂಎಸ್ ಕೋಟ್ಯಾನ್ ಎಂದೇ ಹೆಸರು ಪಡೆದಿರುವ ಎಂ. ಶಶಿಧರ್ ಕೋಟ್ಯಾನ್ ಇವರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಕಮ್ಯೂನಿಟಿ ಮೆಡಿಸಿನ್ ವಿಭಾಗದಲ್ಲಿ ಅಸೋಸಿಯೆಟ್ ಪ್ರೋಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್ಸಿ ಮತ್ತು ಪಿಜಿಡಿಸಿಎ ಪದವೀಧರರಾಗಿರುವ ಶ್ರೀಯುತರು ಶೈಕ್ಷಣಿಕ ರಂಗದಲ್ಲಿ 30 ವರುಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಉಪನ್ಯಾಸಕ ವೃತ್ತಿಯಿಂದ ಹಿಡಿದು ಹಂತ ಹಂತವಾಗಿ ಮೇಲೇರಿರುವ ಇವರು ಪ್ರಸ್ತುತ ಅಸೊಸಿಯೆಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹತ್ತು ಹಲವು ರಿಸರ್ಚ್ ಪ್ರೊಜೆಕ್ಟ್‌ಗಳನ್ನು ನಡೆಸಿರುವ ಇವರು ಮಣಿಪಾಲ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ನರ್ಸಿಂಗ್, ಎಂಎಸ್ಸಿ ನರ್ಸಿಂಗ್, […]

Read More

ಎಂ. ಸಂಜೀವ ಪೂಜಾರಿ – ಅಧ್ಯಕ್ಷರು -1988-89

ಯುವವಾಹಿನಿಯ ಸ್ಥಾಪಕ ಸದಸ್ಯರಲ್ಲಿ ಓರ್ವರಾದ ಶ್ರೀ ಎಂ. ಸಂಜೀವ ಪೂಜಾರಿಯವರು ಬಿಲ್ಲವ ಸಮಾಜಕ್ಕೆ ಯುವವಾಹಿನಿಯಂತಹ ಒಂದು ಯುವಸಂಘಟನೆಯ ಕನಸ್ಸನ್ನು ಮೊದಲಾಗಿ ಕಂಡವರು. ತನ್ನ ಕನಸ್ಸನ್ನು ಹಿರಿಯರಾದ ಶ್ರೀ ಮಂಜುನಾಥ ಸುವರ್ಣ, ಶ್ರೀ ಆದಿಶ್, ಶ್ರೀ ಅಣ್ಣು ಪೂಜಾರಿ, ಶ್ರೀ ದಿನೇಶ್ ಅಮೀನ್ ಮಟ್ಟು ಮುಂತಾದವರಲ್ಲಿ ತಿಳಿಸಿ ಅದರ ಸಾಕಾರಕ್ಕಾಗಿ ಹಗಲಿರುಳು ದುಡಿದವರು. ಡಾನ್ ಬಾಸ್ಕೋ ಕಟ್ಟಡದ ಒಂದು ಕೋಣೆಯಲ್ಲಿ ವಾಸವಾಗಿದ್ದ ಇವರ ಕೋಣೆಯಲ್ಲಿಯೇ ಸಂಘಟನೆಯ ಆರಂಭಿಕ ಸಮಾಲೋಚನೆಗಳು ನಡೆಯುತ್ತಿದ್ದವು. ಬಳಿಕ ಈ ಸಮಾಲೋಚನಾ ಸಭೆಗಳು ಬಾವುಟಗುಡ್ಡೆಯ ಟಾಗೋರ್ […]

Read More

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!