30-12-2025, 7:31 AM
ಬೆಳ್ತಂಗಡಿ: ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಹಾಗೂ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ, ಬೆಳ್ತಂಗಡಿ ತಾಲೂಕು ಇವರ ಸಹಕಾರದೊಂದಿಗೆ ದಿನಾಂಕ 30-12-2025ರಂದು ಸಂಭ್ರಮ ಯುವವಾಹಿನಿ ಕುಟುಂಬದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಘಟಕದ ನಿರ್ದೇಶಕ ಸೌಮ್ಯ ಲಾಯಿಲಾ ಅವರ “ಕನಸು” ನಿವಾಸದಲ್ಲಿ ಯುವವಾಹಿನಿ ಕುಟುಂಬ ಸದಸ್ಯರ ಭಾಗವಹಿಸುವಿಕೆಯೊಂದಿಗೆ ನಡೆಯಿತು. ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಕಾರ್ಯಕ್ರಮವನ್ನು ಹಿರಿಯರಾದ ಗಿರಿಧರ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, […]
Read More
29-12-2025, 6:08 AM
ಮಂಗಳೂರು : ಯುವವಾಹಿನಿ (ರಿ.) ಮಂಗಳೂರು ಘಟಕದ ಸದಸ್ಯರು ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿಗಳ ತಂಡವು ದಿನಾಂಕ: 29- 12-2025 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ, ಕೇರಳದ ಶಿವಗಿರಿಯಲ್ಲಿ ಡಿಸಂಬರ್ 30, 31 ರಂದು ನಡೆಯಲಿರುವ ತೀರ್ಥಾಟನೆಯಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.)ಮಂಗಳೂರು ಘಟಕದ ಮಾಜಿ ಅಧ್ಯಕ್ಷರುಗಳಾದ ಹರೀಶ್ ಪೂಜಾರಿ, ಹರೀಶ್ ವಿ. ಪಚ್ಚನಾಡಿ ಮತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು.
Read More
23-12-2025, 3:55 AM
ಯುವವಾಹಿನಿ (ರಿ.) ಕಾರ್ಕಳ ಘಟಕದ ಆಶ್ರಯದಲ್ಲಿ 6ನೇ ವರ್ಷದ “ಯುವವಾಹಿನಿ ಪೊರ್ಲಾ ಬಾಲೆ – 2025” ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಡಿಸೆಂಬರ್ 23ರಂದು ಮಂಗಳವಾರ ಸಂಜೆ 5.30ಕ್ಕೆ ಕಾರ್ಕಳದ ಶ್ರೀ ಕೃಷ್ಣ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಕೆರ್ವಾಸೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಾಲ್ ಕುಮಾರ್, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ […]
Read More
21-12-2025, 6:58 PM
ಮಂಗಳೂರು : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಪಡ್ಪು ಅವರು ಆಯ್ಕೆಯಾಗಿದ್ದಾರೆ. ಡಿಸೆಂಬರ್ 21ರಂದು ಮಂಗಳೂರು ಪುರಭವನದಲ್ಲಿ ನಡೆದ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಯುವವಾಹಿನಿಯ 38 ನೇ ವಾರ್ಷಿಕ ಸಮಾವೇಶದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಣೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ರೇಖಾಗೋಪಾಲ್, ಪ್ರಥಮ ಉಪಾಧ್ಯಕ್ಷರಾಗಿ ವಿದ್ಯಾ ರಾಕೇಶ್, ದ್ವಿತೀಯ ಉಪಾಧ್ಯಕ್ಷರಾಗಿ ಸುರೇಶ್ ಪೂಜಾರಿ, ಕೋಶಾಧಿಕಾರಿಯಾಗಿ ಸತೀಶ್ ಕಿಲ್ಪಾಡಿ ಮೂಲ್ಕಿ, ಜತೆ ಕಾರ್ಯದರ್ಶಿಯಾಗಿ ಹರೀಶ್ ಕೋಟ್ಯಾನ್ […]
Read More
14-12-2025, 2:29 PM
ಉಪ್ಪಿನಂಗಡಿ: ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಮನೋಜ್ ಎನ್. ಸಾಲ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ. 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು: ಮನೋಜ್ ಎನ್. ಸಾಲ್ಯಾನ್ – ಸುಣ್ಣಾಜೆ ಪ್ರಥಮ ಉಪಾಧ್ಯಕ್ಷರು: ಅಂಕಿತ್ ಎಂ.ಜೆ. ದ್ವಿತೀಯ ಉಪಾಧ್ಯಕ್ಷರು: ಲಕ್ಷ್ಮೀಶ – ನಿಡ್ಡೆಂಕಿ ಕಾರ್ಯದರ್ಶಿ: ರಮೇಶ್ ಎಸ್. ಸಾಂತ್ಯ ಜೊತೆ ಕಾರ್ಯದರ್ಶಿ: ನಯನಾ ಮನೋಹರ್ ಕೋಶಾಧಿಕಾರಿ: ಸದಾಶಿವ ಬಂಗೇರ – ಎಲಿಯ ವ್ಯಕ್ತಿತ್ವ ವಿಕಸನ ನಿರ್ದೇಶಕರು: ವನಿತಾ ಕೃಷ್ಣಪ್ಪ […]
Read More
14-12-2025, 6:22 AM
ಕಡಬ : ಯುವವಾಹಿನಿ (ರಿ.) ಕಡಬ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಉಮೇಶ್ ಬಲ್ಪ ಅವರನ್ನು ಆಯ್ಕೆ ಮಾಡಲಾಗಿದೆ. 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು : ಉಮೇಶ್ ಬಳ್ಪ ಉಪಾಧ್ಯಕ್ಷರು : ಸರಿತಾ ಉಂಡಿಲ ಕಾರ್ಯದರ್ಶಿ:ಸತೀಶ್ ಕೊರಪ್ಪಣೆ ಜತೆ ಕಾರ್ಯದರ್ಶಿ: ರಾಜು ಪದವು ಕೋಶಾಧಿಕಾರಿ: ಸುಧಾಕರ ಪೂಜಾರಿ ಬಲ್ಯ ವ್ಯಕ್ತಿತ್ವ ವಿಕಸನ ನಿರ್ದೇಶಕರು : ರೇಖಾ ಐತ್ತೂರು ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ದೀಕ್ಷಿತ್ ಪಣೆಮಜಲು ಸಮಾಜ […]
Read More
14-12-2025, 6:21 AM
ಸುಳ್ಯ : ಯುವವಾಹಿನಿ (ರಿ.) ಸುಳ್ಯ ಘಟಕದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಹೇಶ್ ಕಲ್ಲಪಣೆ ಅವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರು : ಮಹೇಶ್ ಕಲ್ಲಪಣೆಪ್ರಥಮ ಉಪಾಧ್ಯಕ್ಷರು : ನೂತನ ನೆಟ್ಟಾರುದ್ವಿತೀಯ ಉಪಾಧ್ಯಕ್ಷರು : ಬಾಲಕೃಷ್ಣ ತಡಗಜೆಕಾರ್ಯದರ್ಶಿ : ರಂಜಿತ್ ದರ್ಖಾಸ್ತುಜತೆ ಕಾರ್ಯದರ್ಶಿ : ಚಂದ್ರಾವತಿ ಸುಳ್ಯಕೋಶಾಧಿಕಾರಿ : ಹರೀಶ್ ದೋಳವ್ಯಕ್ತಿತ್ವ ವಿಕಸನ ನಿರ್ದೇಶಕರು : ಉಮೇಶ್ ಮಣಿಕ್ಕರಕ್ರೀಡಾ ಮತ್ತು ಆರೋಗ್ಯ ನಿರ್ದೇಶಕರು : ಲವಿನ್ ಸುಳ್ಯಸಮಾಜ ಸೇವಾ ನಿರ್ದೇಶಕರು : ಶಶಿಕಲಾ ನೀರಬಿದಿರೆಸಾಂಸ್ಕೃತಿಕ, ಕಲೆ ಮತ್ತು […]
Read More
14-12-2025, 4:27 AM
ವಿಟ್ಲ : ಯುವವಾಹಿನಿ (ರಿ.) ವಿಟ್ಲ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ ಟಿ ಆನಂದ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು : ಕೆ.ಟಿ.ಆನಂದ ಪೂಜಾರಿ ಪ್ರಥಮ ಉಪಾಧ್ಯಕ್ಷರು : ಕೇಶವ ಪೂಜಾರಿ ದ್ವಿತೀಯ ಉಪಾಧ್ಯಕ್ಷರು : ಶೋಭಾ ವಿಶ್ವನಾಥ ಪೂಜಾರಿ ಕಾರ್ಯದರ್ಶಿ: ಧನಲಕ್ಷ್ಮೀ ರಾಜೇಶ್ ಕೋಶಾಧಿಕಾರಿ: ಕೀರ್ತನ್ ಸುವರ್ಣ ಸಣ್ಣಗುತ್ತು. ಜೊತೆಕಾರ್ಯದರ್ಶಿ: ಸುನಿತಾ ವಿದ್ಯಾನಿಧಿ ನಿರ್ದೇಶಕರು : ಅಖಿಲೇಶ್ ಮಹಿಳಾ ಸಂಘಟನಾ ನಿರ್ದೇಶಕರು: […]
Read More
14-12-2025, 3:42 AM
ಪುತ್ತೂರು: ಯುವವಾಹಿನಿ (ರಿ.) ಪುತ್ತೂರು ಘಟಕದ 2025–26ನೇ ಸಾಲಿನಸಮಿತ್ ಪಿ ಆಯ್ಕೆಯಾಗಿದ್ದಾರೆ 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು: ಸಮಿತ್ ಪಿ ಪ್ರಥಮ ಉಪಾಧ್ಯಕ್ಷರು: ಅವಿನಾಶ್ ಹಾರಾಡಿ ದ್ವಿತೀಯ ಉಪಾಧ್ಯಕ್ಷರು: ಶರತ್ ಸಾಲ್ಯಾನ್ ಕಾರ್ಯದರ್ಶಿ : ದೀಕ್ಷಿತ್ ಇರ್ದೆ ಜೊತೆ ಕಾರ್ಯದರ್ಶಿ: ಗಣೇಶ್ ಸುವರ್ಣ ಕೋಶಾಧಿಕಾರಿ: ಭವಿತ್ ವ್ಯಕ್ತಿತ್ವ ವಿಕಸನ ನಿರ್ದೇಶಕರು: ಕಿರಣ್ ಕ್ರೀಡಾ ನಿರ್ದೇಶಕರು: ಮೋಹನ್ ಶಿಬರ ಆರೋಗ್ಯ ನಿರ್ದೇಶಕರು: ದಾಮೋದರ ಸುವರ್ಣ ಸಮಾಜಸೇವಾ ನಿರ್ದೇಶಕರು: ಶಿವಪ್ರಸಾದ್ ಕುಂಬ್ರ ಕಲೆ ಮತ್ತು […]
Read More
13-12-2025, 11:51 AM
ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ವತಿಯಿಂದ ಇಡ್ಯಾ ವಿಠೋಬ–ರುಕುಮಾಯಿ ಮಂದಿರದ ಜೀರ್ಣೋದ್ಧಾರದ ಸಂಧರ್ಭದಲ್ಲಿ ದಿನಾಂಕ 13.12.2025ರಂದು ರೂ. 10,000 ಮೊತ್ತದ ನೆರವನ್ನು ಮಂದಿರದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದು, ಮಂದಿರದ ಆಡಳಿತ ಮಂಡಳಿ ಸದಸ್ಯರಿಗೆ ಸಹಾಯಧನವನ್ನು ಹಸ್ತಾಂತರಿಸಿದರು. ಸಮಾಜ ಸೇವೆಯ ಭಾಗವಾಗಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕೈಜೋಡಿಸುವ ಉದ್ದೇಶದಿಂದ ಈ ನೆರವು ನೀಡಲಾಗಿದೆ ಎಂದು ತಿಳಿಸಲಾಯಿತು.
Read More