16-09-2025, 7:07 PM
ಬ್ರಹ್ಮ ಶ್ರೀ ನಾರಾಯಣಗುರು ಧರ್ಮಶಿಕ್ಷಣ ಕೇಂದ್ರ ಕೊಲ್ಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಶೇಷ ತರಗತಿಯಲ್ಲಿ “ಗುರುವಂದನಂ” ಕಾರ್ಯಕ್ರಮ ದಿನಾಂಕ 09-09-2025 ನೇ ಮಂಗಳವಾರ ಗುರುಗಳಾದ ಡಾ. ಅರುಣ್ ಉಳ್ಳಾಲ್ ರವರು ಓಂಕಾರದೊಂದಿಗೆ ತರಗತಿ ಪ್ರಾರಂಭಿಸಿದರು, ಗಣಪತಿ ಶ್ಲೋಕ, ಗುರುಶ್ಲೋಕ,ನಿತ್ಯಾನುಷ್ಠಾನ ಶ್ಲೋಕ ಜೊತೆಯಾಗಿ ಪಠಿಸಲಾಯಿತು.ಧರ್ಮ ಶಿಕ್ಷಣ ಗುರುಗಳಾದ ಡಾ.ಅರುಣ್ ಉಳ್ಳಾಲ್ ಹಾಗೂ ತರಗತಿಯ ಶಿಕ್ಷಕರು ಮತ್ತು ಕೊಲ್ಯ ಘಟಕದ ಶಿಕ್ಷಕರನ್ನು ಗೌರವಿಸಲಾಯಿತು.ಶಿಕ್ಷಕರ ದಿನಾಚರಣೆ ವಿಶೇಷವಾಗಿ ಧರ್ಮ ಶಿಕ್ಷಣ ತರಗತಿಯ ವಿದ್ಯಾರ್ಥಿಗಳಾದ ಕು| ತನಿಷ್ಕ ಗುರುಕೀರ್ತನೆ ಹಾಡಿದರು,ಕು| ಹೃದ್ವಿ ರಾಜೇಶ್, […]
Read More
16-09-2025, 7:04 PM
ನಾರಾಯಣ ಗುರು ಮಂದಿರದಲ್ಲಿ ಭಜನಾ ಸೇವೆ ನೀಡುವುದು ವಾಡಿಕೆ, ಅದೇ ರೀತಿಯಾಗಿ ದಿನಾಂಕ 04/09/25 ಗುರುವಾರ ರಂದು ಸಂಜೆ 6:0 ಗಂಟೆಗೆ ಸರಿಯಾಗಿ ಘಟಕದ ವತಿಯಿಂದ ಭಜನಾ ಸೇವೆ ಜರುಗಿತು. ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರು ದೇವರ ಕೃಪೆಗೆ ಪಾತ್ರರಾದರು. ಭಜನಾ ಸೇವೆಗೆ ಆಗಮಿಸಿದ ಎಲ್ಲರಿಗೂ ಪ್ರಸಾದ ಹಾಗೂ ಫಲಾಹಾರ ನೀಡಲಾಯಿತು.
Read More
16-09-2025, 7:00 PM
ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನೋತ್ಸವವನ್ನು ದಿನಾಂಕ 07/09/2025 ರಂದು ಹಳೆಯಂಗಡಿಯ ಬಿಲ್ಲವ ಮಂದಿರದಲ್ಲಿ ಆಚರಿಸಲಾಯಿತು. ಘಟಕದ ಸದಸ್ಯರೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.
Read More
16-09-2025, 6:57 PM
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ವೆ ಇಲ್ಲಿಯ ಶಾಲಾ ಮಕ್ಕಳಿಗೆ ಪ್ರತಿವರ್ಷ ನೀಡುವಂತೆ ಈ ವರ್ಷವೂ ಕೂಡ ,ಘಟಕದ ವತಿಯಿಂದ ಮಕ್ಕಳಿಗೆಲ್ಲ ಸಿಹಿ ನೀಡಿ ಸ್ಕೂಲ್ ಐಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ,ಕಾರ್ಯದರ್ಶಿ ,ಉಪಾಧ್ಯಕ್ಷರು ,ಸ್ಥಾಪಕ ಅಧ್ಯಕ್ಷರು, ಮಾಜಿ ಅಧ್ಯಕ್ಷರು ,ಸಲಹೆಗಾರರು ಹಾಗೂ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.
Read More
16-09-2025, 6:54 PM
ಬಾಕ್ರಬೈಲ್ ಶ್ರೀ ದುರ್ಗಾ ಪರಮೇಶ್ವರಿ ಭಕ್ತ ವೃಂದದ 32 ಸದಸ್ಯರು ಕಟೀಲು ಶ್ರೀ ದೇವಿ ಸನ್ನಿದಾನಕ್ಕೆ ಪಾದಯಾತ್ರೆ ತೆರಳಿದ್ದು, ಗ್ರಾಮಚಾವಡಿ ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಅವರಿಗೆ ಘಟಕದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಯಿತು..ಯುವ ವಾಹಿನಿ ಕೊಣಾಜೆ ಘಟಕದ ಅಧ್ಯಕ್ಷರು ಶ್ರೀ ಬಾಬು ಬಂಗೇರ ಎಲ್ಲರನ್ನು ಸ್ವಾಗತಿಸಿದರು, ಶ್ರೀ ದುರ್ಗಾ ಪರಮೇಶ್ವರಿ ಭಕ್ತ ವೃಂದ ಪಾದಯಾತ್ರೆ ಸಂಚಾಲಕರಾದ ಶ್ರೀ ಅರವಿಂದ್ ಬಾಕ್ರ ಬೈಲ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು, ಈ ಸಂದರ್ಭದಲ್ಲಿ ಗ್ರಾಮ ಚಾವಡಿ ಕೊಣಾಜೆ […]
Read More
16-09-2025, 6:50 PM
ಯುವವಾಹಿನಿ ಸಂಚಲನಾ ಸಮಿತಿ ಮುಂಡಾಜೆ ಇದರ ಆತಿಥ್ಯದಲ್ಲಿ ” ಬಿರುವೆರೆ ಗೊಬ್ಬು ಕೆಸರ್ ದ ಕಂಡಡ್ ” ಕಾರ್ಯಕ್ರಮ ದಿನಾಂಕ 14.09.2025 ಆದಿತ್ಯವಾರದಂದು ಮುಂಡಾಜೆಯ ಪಿಲತಡ್ಕದ ಪೂವಪ್ಪ ಪೂಜಾರಿಯವರ ಗದ್ದೆಯಲ್ಲಿ ನಡೆಯಿತು. ಕುದ್ರೋಳಿ ದೇವಸ್ಥಾನದ ಅರ್ಚಕರಾದ ರೂಪೇಶ್ ಶಾಂತಿ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು, ಪ್ರಚಾರ ನಿರ್ದೇಶಕರಾದ ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ […]
Read More
16-09-2025, 6:46 PM
13-09-2025 ರಂದು ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ಯುವವಾಹಿನಿ ಸಭಾಂಗಣದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಅದ್ಯಕ್ಷರಾದ ನೈನಾ ವಿಶ್ವನಾಥ್ ಎಲ್ಲರನ್ನು ಸ್ವಾಗತಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮೊದಲಿಗೆ ಮಂಗಳೂರು ಮಹಿಳಾ ಘಟಕದ ಸದಸ್ಯರು ಭಜನೆಯನ್ನು ಪ್ರಾರಂಭ ಮಾಡಿದರು, ಆಮೇಲೆ ಮಂಗಳೂರು ಘಟಕದ ಸದಸ್ಯರು,ಕ್ರಷ್ಣ ಭಜನೆ ತಂಡ, ಹಾಗೂ ಬಿಲ್ಲವ ಮಹಿಳಾ ಸಂಘದ ಸದಸ್ಯರು ಮದ್ಯಾಹ್ನದವರೆಗೆ ಭಜನೆ ಮಾಡಿದರು,ನಂತರ ಮಹಾ ಪೂಜೆ ನಡೆಯಿತು.ಪ್ರಸಾಧ ವಿತರಣೆ ಆಗಿ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.ಗುರುಪೂಜೆ […]
Read More
15-09-2025, 4:24 PM
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್(ರಿ) ಕುಂಟಲ್ಪಾಡಿ ಸಹಭಾಗಿತ್ವದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ 11/09/2025 ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಮುಂಜಾನೆ ಗಣಹೋಮ ನಡೆಸಿ ಮಂದಿರವನ್ನು ಶುದ್ಧೀಕರಿಸಿ ಗುರುಗಳ ಮೂರ್ತಿಗೆ ಅಭಿಷೇಕವನ್ನು ಮಾಡಲಾಯಿತು. ನಂತರ ಹೂಗಳಿಂದ ಅಲಂಕರಿಸಿ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಜಾತ ನವೀನ್ ಕಕ್ಕೆಬೆಟ್ಟು ರವರ ಮನೆಯಲ್ಲಿ ಗುರುಗಳ ಮೂರ್ತಿಯನ್ನು ಇರಿಸಿ, ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಮೇರಿಹಿಲ್ ಗುರುನಗರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಸತ್ಸಂಗ ಹಾಗೂ ಧಾರ್ಮಿಕ […]
Read More
15-09-2025, 4:17 PM
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ, ಗುರುಪೂಜೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮವು ಸೆ.14 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಶಾಂತಿವರ್ಯರಾದ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು. ಪೂರ್ವಾಹ್ನ ಗಂಟೆ 8.30 ರಿಂದ ಭಜನಾ ಸಂಕೀರ್ತನೆ, 9.30 ರಿಂದ ಗುರುಪೂಜೆ ನಂತರ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಬ್ರಹ್ಮ ಶ್ರೀ […]
Read More
15-09-2025, 4:10 PM
ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೆಯ ಜನುಮ ಮಹೋತ್ಸವದ ಪ್ರಯುಕ್ತ ಈ ಸಾಲಿನ ಮೊದಲ ಗೃಹಭಜನೆ ಘಟಕದ ಆರೋಗ್ಯ ನಿರ್ದೇಶಕರಾದ ಶ್ರೀಮತಿ ಅನಿತಾ ಕಮಲಾಕ್ಷ ಅವರ ಮನೆಯಲ್ಲಿ ನೆರವೇರಿತು. ಘಟಕದ ಸದಸ್ಯರಾದ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿತು. ಘಟಕದ ಸದಸ್ಯರಿಂದ ಭಜನೆ ಹಾಗೂ ಕುಣಿತ ಭಜನೆ ಕಾರ್ಯಕ್ರಮ ಮೂಡಿ ಬಂತು. ಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ ಶ್ರೀಮತಿ ಅನಿತಾ ಕಮಲಾಕ್ಷ […]
Read More