22-10-2025, 4:17 PM
ಘಟಕದ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮವು ದಿನಾಂಕ 21/09/2025 ಆದಿತ್ಯವಾರ ನಾರಾಯಣ ಗುರು ಸಭಾಗೃಹ ಕುಳಾಯಿ ಇಲ್ಲಿ ನಡೆಯಿತು. ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ ಇದರ ಅಧ್ಯಕ್ಷರಾದ ಶ್ರೀಯುತ ಕೇಶವ ಸುವರ್ಣರವರು ಮಾತನಾಡಿ ಶ್ರೀ ಗುರುಗಳ ಜೀವನ ಸಾಮರಸ್ಯದ ಬಗೆಗೆ ವಿವರಿಸಿದರು. ಶ್ರೀಮತಿ ಶೃತಿ ಅಮೀನ್. ಕೆ ಇವರು ಗುರುಸಂದೇಶ ನೀಡುವುದರ ಮೂಲಕ ಗುರುವರ್ಯರ ಜೀವನದ ವಾಸ್ತವಿಕ ಘಟನೆಗಳು ಹಾಗೂ ನಮ್ಮ ಜೀವನದಲ್ಲಿ ಆಧುನಿಕತೆಯ ಗಾಳಿ ಯಾವ ರೀತಿ ಮಡುಗಟ್ಟಿದೆ, ಆಧುನಿಕತೆಯಿಂದ […]
Read More
22-10-2025, 2:52 PM
ದಿನಾಂಕ 08-07-2025 ರಂದು ಘಟಕದ ಮಾಜಿ ಅಧ್ಯಕ್ಷರಾದ ಕಿಶೋರ್ ಕುಮಾರ್ ರವರ ಮನೆಯಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ನಡೆಯಿತು. ಪ್ರಥಮವಾಗಿ ಅಂದಿನ ವಾರದ ಸಭೆಯನ್ನು ಅವರ ಮನೆಯಲ್ಲಿಯೇ ನಡೆಸಿಕೊಂಡೆವು ನಂತರ ಒಂದು ಗಂಟೆಯ ಭಜನಾವಳಿ ನಡೆಯಿತು. ಮಾಜಿ ಅಧ್ಯಕ್ಷರು,ಸದಸ್ಯರೆಲ್ಲರೂಡನೆ ಮನೆಯವರೂ ಕೂಡಿ ಭಜನಾವಳಿಯನ್ನು ಚಂದಗೊಳಿಸಿದರು. ಮಂಗಳ ಹಾಡುವುದರೊಡನೆ ದೇವರ ಆರತಿ ಮುಗಿಸಿ ಪ್ರಸಾದ ವಿತರಣೆ ಮಾಡಿದರು. ತದನಂತರ ಪಲಹಾರದ ಸೇವನೆಯೊಂದಿಗೆ ಭಜನಾ ಸೇವೆಯನ್ನು ಮುಕ್ತಾಯಗೊಳಿಸಲಾಯಿತು.
Read More
14-09-2025, 5:45 PM
ವನಮಹೋತ್ಸವದ ಪ್ರಯುಕ್ತ ಪರಿಸರಕ್ಕೆ ಸಣ್ಣ ಕೊಡುಗೆ ನೀಡುವುದರ ನಿಟ್ಟಿನಲ್ಲಿ ಘಟಕದ ಸದಸ್ಯರಿಗೆ ಫೋಟೊ ಕಾಂಟೆಸ್ಟ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕಿಶೋರ್ ಕುಮಾರ್ ರವರು, ದ್ವಿತೀಯ ಬಹುಮಾನವನ್ನು ಸುಲತಾ ಪೂಜಾರಿಯವರು,ತೃತೀಯ ಬಹುಮಾನವನ್ನು ಪಲ್ಲವಿಯವರು ಹಾಗೂ ಪ್ರೋತ್ಸಾಹಕ ಬಹುಮಾನವನ್ನು ಭಾಸ್ಕರ್ ಸಾಲ್ಯಾನ್ ಹಾಗೂ ರೇವತಿ ನವೀನ್ ಇವರು ಗಳಿಸಿರುತ್ತಾರೆ.
Read More
14-09-2025, 5:42 PM
ಅಳಿವಿನಂಚಿನಲ್ಲಿರುವ ನಮ್ಮ ತುಳುನಾಡ ಸಂಸ್ಕ್ರತಿಯ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ ಎಂದು ಮುಖ್ಯ ಅತಿಥಿಗಳಾದ ದೇವೇಂದ್ರ ಡಿ. ಕೋಟ್ಯಾನ್ ತಿಳಿಸಿದರು. ಅಲ್ಲದೆ ಆಷಾಢದ ಕಷ್ಟ ಶ್ರಾವಣದ ಸುಖವನ್ನು ಸವಿವರವಾಗಿ ತಿಳಿಸುವುದರ ಮೂಲಕ ಕೃಷಿ ಬದುಕಿನ ಮೂಲಕ ತುಳುನಾಡ ಜನರ ಜೀವನ ಯಾವ ರೀತಿ ಬೆಸೆದುಕೊಂಡಿದೆ ಎನ್ನುವುದನ್ನು ತಿಳಿಸಿಕೊಟ್ಟರು. ಅಲ್ಲದೆ ತುಳುನಾಡ ಜನರ ಹಬ್ಬ ಹರಿದಿನಗಳ ಮಹತ್ವವನ್ನು ತಿಳಿಸಿಕೊಟ್ಟರು. ಅದೇ ರೀತಿ ಆಷಾಢ ಮಾಸದಲ್ಲಿ ದೇವಸ್ಥಾನಗಳು, ದೈವ ದೇವರುಗಳ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡು […]
Read More
14-09-2025, 5:32 PM
ದಿನಾಂಕ 19-08-2025 ರಂದು ಘಟಕದ ಮಾಜಿ ಅಧ್ಯಕ್ಷರಾದ ಅಶೋಕ್ ಸುವರ್ಣ ಹಾಗೂ ತಾರಾ ಅಶೋಕ್ ರವರ ಮನೆಯಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ನಡೆಯಿತು. ಪ್ರಥಮವಾಗಿ ಅಂದಿನ ವಾರದ ಸಭೆಯನ್ನು ನಡೆಸಲಾಯಿತು. ನಂತರ ಭಜನಾವಳಿ ನಡೆಯಿತು. ಅಧ್ಯಕ್ಷರು, ಕಾರ್ಯದರ್ಶಿ, ಮಾಜಿ ಅಧ್ಯಕ್ಷರು,ಸದಸ್ಯರೆಲ್ಲರೂಡನೆ ಮನೆಯವರೂ ಕೂಡಿ ಭಕ್ತಿ ಭಾವದಿಂದ ತಾಳ ಹಾಕುತ್ತ ಭಜನಾವಳಿಯನ್ನ ನಡೆಸಲಾಯಿತು.. ಮಂಗಳ ಹಾಡುವುದರೊಡನೆ ದೇವರ ಆರತಿ ಮುಗಿಸಿ ಪ್ರಸಾದ ವಿತರಣೆ ಮಾಡಲಾಯಿತು. ತದನಂತರ ಪಲಹಾರದ ಸೇವನೆಯೊಂದಿಗೆ ಭಜನಾ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
Read More
14-09-2025, 5:29 PM
ದಿನಾಂಕ 23.08.2025 ರಂದು ಅನುದಾನಿತ ಕಳುವಾರು ಹಿರಿಯ ಪ್ರಾಥಮಿಕ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ, ಚೇಳ್ಯಾರು ಕಾಲೊನಿ ಇಲ್ಲಿ ಘಟಕದ ವತಿಯಿಂದ ವನಮಹೋತ್ಸವ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಘಟಕದ ಹಲವು ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಅನೇಕ ಸಸಿಗಳನ್ನು ವಿದ್ಯಾರ್ಥಿಗಳು, ಘಟಕದ ಅಧ್ಯಕ್ಷರು, ಸದಸ್ಯರು ಹಾಗೂ ಅಧ್ಯಾಪಕರೆಲ್ಲರೂ ಸೇರಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅದೇ ಸಂಧರ್ಭದಲ್ಲಿ ಅಧ್ಯಾಪಕರಿಗೆ ಹಾಗೂ […]
Read More
13-08-2025, 2:33 PM
ಯುವವಾಹಿನಿ (ರಿ) ಸುರತ್ಕಲ್ ಘಟಕ ಮಹಿಳಾ ದಿನಾಚರಣೆ 11/03/2025 ರಂದು ಮಹಿಳಾ ಮಂಡಲ ಸುರತ್ಕಲ್ ಇಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯಾದ ಶ್ರೀಮತಿ ಅನುರಾಧ ರಾಜೀವ್ ಇವರನ್ನು ಸನ್ಮಾನಿಸಲಾಯಿತು. ನಂತರ ಇವರು ಮಾತನಾಡಿ ಸಂಸಾರವೆಂಬ ಸಾಗಿಸಿ ಸುರಕ್ಷಿತವಾಗಿ ದಡ ತಲುಪಿಸುವ ಪ್ರತೀಯೊಂದು ಹೆಣ್ಣು ಮಗಳೂ ಕೂಡಾ ಸರ್ವ ಶ್ರೇಷ್ಠಳೆ ಎಂದು ತಿಳಿಸಿದರು. ಅದೇ ರೀತಿ ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂಧರ್ಭದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಬಗೆಗೆ ಮಾಹಿತಿ ನೀಡುವ […]
Read More
14-07-2025, 3:40 AM
ಯುವವಾಹಿನಿ (ರಿ) ಸುರತ್ಕಲ್ ಘಟಕದ 2025 -26 ನೇ ಸಾಲಿನ ಪದಗ್ರಹಣ ‘ಸಾರಥ್ಯ- 2025’ ಸಮಾರಂಭವು ದಿನಾಂಕ 19.01.2025 ರಂದು ಬ್ರಹ್ಮ ಶ್ರೀ ನಾರಾಯಣ ಗುರು ಸಭಾಗೃಹ ಕುಳಾಯಿಯಲ್ಲಿ ನಡೆಯಿತು. ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೂಜೆಯ ಮುಖೇನಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅನಂತರ ಘಟಕದ ಸದಸ್ಯರ ನೃತ್ಯ ವೈವಿದ್ಯ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸ೦ಘ ಕುಳಾಯಿ ಯ ಮಾಜಿ ಉಪಾಧ್ಯಕ್ಷರಾದ ಚಂದ್ರಹಾಸ ಮೂಡುಬೆಟ್ಟು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ […]
Read More
22-09-2024, 4:24 AM
ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 170ನೇ ಜಯಂತಿಯ ಪ್ರಯುಕ್ತ ಶ್ರೀ ಗುರುಸ್ಮರಣೆ ಕಾರ್ಯಕ್ರಮವು ದಿನಾಂಕ 22-09-2024ರ ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00ರ ವರೆಗೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಕಾಟಿಪಳ್ಳದಲ್ಲಿ ನಡೆಯಿತು. ಬೆಳಿಗ್ಗೆ 8.30 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಂದಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಜನಾ ಸ್ಪರ್ಧೆಯನ್ನು ಪ್ರಾರಂಭ ಮಾಡಲಾಯಿತು. ತೀರ್ಪುಗಾರರಾಗಿ ಶ್ರೀ ದೀನ್ ರಾಜ್ ಪೆರ್ಮುದೆ ಮತ್ತು ಕುಮಾರಿ ವೈಶಾಲಿ ಡಿ ಬಂಗೇರ ಉಡುಪಿ […]
Read More